Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕರನ್ನು ಬಿಜೆಪಿಯವರು ಬಲವಂತವಾಗಿ ಕೂಡಿ ಹಾಕಿದ್ದಾರೆ- ಡಿ.ಕೆ.ಸುರೇಶ್ ಆರೋಪ

ಅತೃಪ್ತ ಶಾಸಕರನ್ನು ಬಿಜೆಪಿಯವರು ಬಲವಂತವಾಗಿ ಕೂಡಿ ಹಾಕಿದ್ದಾರೆ- ಡಿ.ಕೆ.ಸುರೇಶ್ ಆರೋಪ
ನವದೆಹಲಿ , ಗುರುವಾರ, 7 ಫೆಬ್ರವರಿ 2019 (16:38 IST)
ದೆಹಲಿ : ಆಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿಯವರು  ಕೆಲವು ಶಾಸಕರನ್ನು ಬಲವಂತವಾಗಿ ಪೊಲೀಸರು, ಗೂಂಡಾಗಳಿಂದ ಬೆದರಿಸಿ ಕೂಡಿ ಹಾಕಿದ್ದಾರೆ’ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.


‘ಆಪರೇಶನ್ ಕಮಲ ಎಂಬುದನ್ನು ಯಾರು ನೋಡಿರಲಿಲ್ಲ. ಇದನ್ನು ಶುರು ಮಾಡಿದ್ದೇ ಕರ್ನಾಟಕದಲ್ಲಿ .  ಆಪರೇಶನ್ ಕಮಲ ಮಾಡಿದ್ದೇ ಬಿಎಸ್ ಯಡಿಯೂರಪ್ಪ. ಆ ಮೂಲಕ ಕೆಲವು ಶಾಸಕರನ್ನು ಬಲವಂತವಾಗಿ ಪೊಲೀಸರು, ಗೂಂಡಾಗಳಿಂದ ಬೆದರಿಸಿ ಕೂಡಿ ಹಾಕಿದ್ದಾರೆ. ರಾಜಕೀಯವಾಗಿ ಮುಗಿಸುತ್ತೇವೆಂದು ಶಾಸಕರಿಗೆ ಬೆದರಿಕೆ ಹಾಕಿದ್ದಾರೆ ಎಂದು  ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.


‘ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಹಣ ಕೊಟ್ಟಿರುವ ವಿಡಿಯೋ, ದಾಖಲೆಗಳು ನಮ್ಮ ಬಳಿಯಿವೆ. ಆ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಪ್ರಧಾನಿ ಮೋದಿ ಯುಗ ಅಂತ್ಯವಾಗ್ತಿರೋದು ಕಾಣ್ತಿದ್ದೇವೆ’ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಗುಂಡಾಗಿರಿಗೆ ಹೆದರಿ ಹೆಲ್ಮೆಟ್ ಧರಿಸಿ ಬಂದ ಪತ್ರಕರ್ತರು