Select Your Language

Notifications

webdunia
webdunia
webdunia
webdunia

ನೀಲಮಣಿ ರಾಜುಗೆ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧನೆ

ನೀಲಮಣಿ ರಾಜುಗೆ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧನೆ
ಪುದುಚೇರಿ , ಬುಧವಾರ, 1 ನವೆಂಬರ್ 2017 (13:00 IST)
ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ ನೀಲಮಣಿ ಎನ್.ರಾಜು ಅವರನ್ನು ಪುದುಚೇರಿಯ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧಿಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವಿಟ್ ಸಂದೇಶ ರವಾನಿಸಿದ ಕಿರಣ್ ಬೇಡಿ,  ನೀಲಮಣಿ ರಾಜು ವೃತ್ತಿಪರತೆಯನ್ನು ಪಾಲಿಸಲು ಶಕ್ತಿ ದೊರೆಯಲಿ. ಎಲ್ಲಾ ಸ್ಥರದ ಜನತೆಗೆ ನ್ಯಾಯ ದೊರಕಿಸಿಕೊಡುವಂತೆ ಕಾರ್ಯನಿರ್ವಹಿಸಿ ಎಂದು ಹಾರೈಸಿದ್ದಾರೆ.
 
1983 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ನೀಲಮಣಿ, ಪೊಲೀಸ್ ಮಹಾನಿರ್ದೇಶಕ ಆರ್‌.ಕೆ.ದತ್ತಾ ತೆರವುಗೊಳಿಸಿರುವ ಸ್ಥಾನವನ್ನು ತುಂಬಿದ್ದಾರೆ.
 
ಪೊಲೀಸ್ ಮಹಾನಿರ್ದಶಕಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನಿಸುವುದಾಗಿ ನೀಲಮಣಿ ಎನ್.ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿಯಾಗಿ 100 ದಿನಗಳನ್ನು ಪೂರೈಸಿದ ರಾಮನಾಥ್ ಕೋವಿಂದ್