Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ

ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ
ತುಮಕೂರು , ಮಂಗಳವಾರ, 4 ಡಿಸೆಂಬರ್ 2018 (19:05 IST)
ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಬಂದು ಆರು ತಿಂಗಳಾದರೂ ಯಾವ ಕಾರ್ಯಕ್ರಮವಿಲ್ಲ. ರಾಜ್ಯದ ಲ್ಲಿ ಭೀಕರ ಬರಗಾಲವಿದೆ. ದನಕರುಗಳು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರನ್ನ‌ ನೀವು ಬದುಕಿದ್ದೀರಾ ಅಂತಾ ಕೇಳೋ ಸೌಜನ್ಯಕ್ಕೂ ಸರ್ಕಾರವಿಲ್ಲ ಎಂದು ಕೇಂದ್ರ ಸಚಿವ ಟೀಕೆ ಮಾಡಿದ್ದಾರೆ.

ತುಮಕೂರಿನಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ‌ ಹೇಳಿಕೆ ನೀಡಿದ್ದು, ಸ್ವಲ್ಪ ದಿನ ಟೈಂ ಕೊಡೋಣ ಅಂತಾ ಹೇಳಿ   ಅವರಿಗೆ ಟೈಂ ಕೊಟ್ರೆ ಯಾವ ಕೆಲಸವನ್ನ ಮಾಡಲಿಲ್ಲ. ರೈತರ ಸಂಕಷ್ಟಕ್ಕೆ ನಾವು ಪರಿಹಾರ ಮಾಡೋಣ ಅಂತಾ ಬರ ಪ್ರವಾಸ ಹಮ್ಮಿಕೊಂಡಿದ್ದೇವೆ. ಈಗಾಗಲೇ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪು ರ ಕ್ಕೆ ತೆರಳಿ ಸಮೀಕ್ಷೆ ಮಾಡಿದ್ದೇವೆ.

ರೈತರು ತುಂಬಾ ಹತಾಶರಾಗಿದ್ದಾರೆ. ಎಲ್ಲಿಯೂ ಕುಡಿಯುವ ನೀರಿಲ್ಲ, ದನಗಳಿಗೆ ಮೇವಿಲ್ಲ. ಗೋಶಾಲೆಗಳಿಲ್ಲ.
ಒಬ್ಬ ಮಂತ್ರಿಯೂ ಬರ ಪ್ರವಾಸ ಮಾಡಿಲ್ಲ ಎಂದು ದೂರಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಪ್ರಭಾವಳಿ, ಮುಖವಾಡ ಎಗರಿಸಿದ ಕಳ್ಳರು