Select Your Language

Notifications

webdunia
webdunia
webdunia
webdunia

ನಾಲೆಗೆ ಬೈಕ್ ಬಿದ್ದು ಒಂದೇ ಕುಟುಂಬದ ಮೂವರ ದುರ್ಮರಣ: ಸಚಿವ ಹೇಳಿದ್ದೇನು ಗೊತ್ತಾ?

ನಾಲೆಗೆ ಬೈಕ್ ಬಿದ್ದು ಒಂದೇ ಕುಟುಂಬದ ಮೂವರ ದುರ್ಮರಣ: ಸಚಿವ ಹೇಳಿದ್ದೇನು ಗೊತ್ತಾ?
ಮಂಡ್ಯ , ಸೋಮವಾರ, 3 ಡಿಸೆಂಬರ್ 2018 (19:45 IST)
ನಾಲೆಗೆ ಬೈಕ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣ ನಡೆದಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಹೇಳಿಕೆ ನೀಡಿದ್ದು, ನಾಲೆಗೆ ಬೈಕ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು ದುಃಖಕರ ಸಂಗತಿ. ಈಗಾಗಲೇ ಸ್ಥಳೀಯ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ಮೃತರ ಕುಟುಂಬಗಳಿಗೆ ಬೇಕಾದ ಸಹಕಾರ ನೀಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಸಿಗುವ ಪರಿಹಾರವನ್ನು ಮೃತರ ಕುಟುಂಬಗಳಿಗೆ ಕೊಡಿಸುತ್ತೇನೆ ಎಂದರು.

ವಿಶ್ವೇಶ್ವರಯ್ಯ ನಾಲೆ ನಿರ್ಮಾಣವಾದಗಿನಿಂದ ಅನಾಹುತಗಳು ನಡೆಯುತ್ತಲೇ ಇವೆ. ನಾನು ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ನಮ್ಮ ಶಾಸಕರೇ ಕೆಲಸ ಮಾಡುವಾಗ ಈ ರೀತಿಯ ಘಟನೆಗಳು ನಡೆಯುತ್ತಿದೆ. ಇದು ದುರ್ದೈವದ ಸಂಗತಿ ಎಂದರು.
ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ನಾಲೆಗಳಿಗೆ ತಡೆಗೋಡೆ ನಿರ್ಮಿಸುವ ಕೆಲಸ ತ್ವರಿತಗತಿಯಲ್ಲಿ ನಡೆಯಲಿದೆ ಎಂದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಕೆಎಸ್ ಆರ್ ಟಿಸಿ ಚಾಲಕರು!