Select Your Language

Notifications

webdunia
webdunia
webdunia
webdunia

ಭೂಗತ ಪಾತಕಿ ಬನ್ನಂಜೆ ರಾಜಾ ಜುಲೈ 8ರಂದು ಉಡುಪಿಗೆ

ಭೂಗತ ಪಾತಕಿ ಬನ್ನಂಜೆ ರಾಜಾ ಜುಲೈ 8ರಂದು ಉಡುಪಿಗೆ
ಉಡುಪಿ , ಶುಕ್ರವಾರ, 6 ಜುಲೈ 2018 (16:22 IST)
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾ ಜುಲೈ 8ರಂದು ಉಡುಪಿಗೆ ಆಗಮಿಸಲಿದ್ದಾನೆ. ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯಿಯನ್ನು ಭೇಟಿಯಾಗಲು ಬನ್ನಂಜೆ ರಾಜಾ ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದ. 

ಆತನಿಗೆ ನ್ಯಾಯಾಧೀಶರು ವಿಶೇಷ ಅನುಮತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದಿರುವ ಬನ್ನಂಜೆ ರಾಜಾ ಜುಲೈ 8ರಂದು ಉಡುಪಿಯ ಮಲ್ಪೆಗೆ ಬರಲಿದ್ದಾನೆ ಎಂದು ತಿಳಿದು ಬಂದಿದೆ. ಬನ್ನಂಜೆ ರಾಜಾ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ಕೂಡಾ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭೂಗತ ಪಾತಕಿ ಬನ್ನಂಜೆ ರಾಜಾನನ್ನು 2015ರ ಫೆಬ್ರವರಿ 10ರಂದು ಸೌತ್ ಆಫ್ರಿಕಾದ ಮೊರೆಕ್ಕಾದಲ್ಲಿ ಬಂಧಿಸಲಾಗಿತ್ತು. ಸುಮಾರು 15 ಪ್ರಕರಣಗಳನ್ನು ಉಲ್ಲೇಖಿಸಿ ಮೊರೆಕ್ಕೋದಿಂದ ಬಂಧಿಸಿ ಉಡುಪಿಗೆ ಕರೆ ತರಲಾಗಿತ್ತು. ಸದ್ಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜಾನ ವಿಚಾರಣೆ ವಿಡೀಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದವರನ್ನು ಮರೆತಿತೇ ಸರಕಾರ?