Select Your Language

Notifications

webdunia
webdunia
webdunia
webdunia

ಪುಲ್ವಾಮಾ ಘಟನೆ ಖಂಡಿಸಿ ಕರೆ ನೀಡಿದ್ದ ಬಂದ್ ನೀರಸ

ಪುಲ್ವಾಮಾ ಘಟನೆ ಖಂಡಿಸಿ ಕರೆ ನೀಡಿದ್ದ ಬಂದ್ ನೀರಸ
ಕೋಲಾರ , ಮಂಗಳವಾರ, 19 ಫೆಬ್ರವರಿ 2019 (17:15 IST)
ಪುಲ್ವಾಮಾದಲ್ಲಿ ಯೋಧರ ಹತ್ಯೆ ಖಂಡಿಸಿ ಹಾಗೂ ದೇಶದ್ರೋಹಿಗಳನ್ನು ದೇಶದಿಂದ ಹೊರ ಹಾಕುವಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರ ಬಂದ್ ಗೆ‌ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪುಲ್ವಾಮಾದಲ್ಲಿ ಯೋಧರ ಹತ್ಯೆ ಖಂಡಿಸಿ ಹಾಗೂ ದೇಶದ್ರೋಹಿಗಳನ್ನು ದೇಶದಿಂದ ಹೊರ ಹಾಕುವಂತೆ ಆಗ್ರಹಿಸಿ  ಕೋಲಾರ ಬಂದ್ ಗೆ ಕರೆ ನೀಡಲಾಗಿತ್ತು.

ಶ್ರೀ ರಾಮಸೇನೆ ಸೇರಿದಂತೆ ವಿವಿಧ  ಸಂಘಟನೆಗಳು ಹಾಗೂ ಕನ್ನಡ‌ ಪರ ಸಂಘಟನೆಗಳಿಂದ ಬಂದ್ ಗೆ ಕರೆ ಕೊಡಲಾಗಿತ್ತು. ರಸ್ತೆ ಗಿಳಿದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನೀಡದ ಕಾರಣ ನಗರದಲ್ಲಿ ಬಂದ್ ಬೆಂಬಲಿಸುವಂತೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಆದರೂ ಎಂದಿನಂತೆ ಜನಜೀವನ ಆರಂಭವಾಗಿದೆ. ಸಾರಿಗೆ ಸಂಚಾರ ಕಾರ್ಯನಿರ್ವಹಿಸುತ್ತಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಅನಂತಕುಮಾರ ಹೆಗಡೆನ ಜೈಲಿಗೆ ಹಾಕ್ತಿದ್ದೆ ಎಂದ ಸಿದ್ದರಾಮಯ್ಯ!