Select Your Language

Notifications

webdunia
webdunia
webdunia
webdunia

ಸರಕಾರದಲ್ಲಿ ಮುಂದುವರಿಯಲು ಸಿಎಂಗೆ ನೈತಿಕತೆ ಇಲ್ಲ ಎಂದ ಸಂಸದ

ಸರಕಾರದಲ್ಲಿ ಮುಂದುವರಿಯಲು ಸಿಎಂಗೆ ನೈತಿಕತೆ ಇಲ್ಲ ಎಂದ ಸಂಸದ
ಬೀದರ್ , ಸೋಮವಾರ, 19 ನವೆಂಬರ್ 2018 (15:53 IST)
ರೈತರ ಬಗ್ಗೆ ಮುಖ್ಯಮಂತ್ರಿ ಹಗುರುವಾಗಿ ಹೇಳಿಕೆ ನೀಡಿದ್ದಾರೆ. ರೈತ ಸಮುದಾಯ ಸರಕಾರಕ್ಕೆ ಹಿಡಿ ಶಾಪ ಹಾಕತ್ತಿದೆ ಎಂದು ಬಿಜೆಪಿ ಸಂಸದ ಆರೋಪಿಸಿದ್ದಾರೆ.

ಅನ್ನದಾತರನ್ನು ಗೂಂಡಾಗಳು ಹಾಗೂ ರೈತ ಮಹಿಳೆಗೆ ನೀಚವಾಗಿ ಮಾತನಾಡಿದ್ದು ನಾನು ಖಂಡಿಸುತ್ತೇನೆ. ಸರ್ಕಾರ ದಲ್ಲಿ ಮುಂದುವರಿಯಲಿಕ್ಕೆ ಸಿಎಂಗೆ ಯಾವ ನೈತಿಕತೆ ಇಲ್ಲ ಎಂದು ಬೀದರ್ ನಲ್ಲಿ ಸಂಸದ ಭಗವಂತ್ ಖೂಬಾ ಹೇಳಿಕೆ ನೀಡಿದ್ದಾರೆ.

ರೈತ ಸಮುದಾಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದೆ. ಹೆಚ್.ಡಿ.ದೇವೇಗೌಡ್ರು ನಾವು ಮಣ್ಣಿನ ಮಕ್ಕಳು ಎಂದು ಹೇಳುತ್ತಾರೆ.‌ ಆದ್ರೆ ಅವರ ಮಗ ರೈತರ ಬಗ್ಗೆ ಯಾವ ರೀತಿ ಹೇಳಿಕೆ ನೀಡುತ್ತಾರೆ ನೋಡಿ ಎಂದರು.

ಸಿಎಂಗೆ ನ್ಯಾಯ ಕೇಳಲು ರೈತರು ಹೋದರೆ ಅವರನ್ನು ಗುರಾಯಿಸಿ ನೋಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಖೂಬಾ ಪ್ರಶ್ನೆ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಗುಂಪಿನ ನಡುವಿನ ಘರ್ಷಣೆಯಲ್ಲಿ ಯುವಕ ಬಲಿ