Select Your Language

Notifications

webdunia
webdunia
webdunia
webdunia

ದೋಸ್ತಿ ಸರ್ಕಾರದಿಂದ ಬಿಜೆಪಿ ನಾಯಕರ ಫೋನ್ ಟ್ಯಾಪ್ ಆಗುತ್ತಿದೆ -ಆರ್. ಅಶೋಕ್

ದೋಸ್ತಿ ಸರ್ಕಾರದಿಂದ ಬಿಜೆಪಿ ನಾಯಕರ ಫೋನ್ ಟ್ಯಾಪ್ ಆಗುತ್ತಿದೆ -ಆರ್. ಅಶೋಕ್
ಬೆಂಗಳೂರು , ಶುಕ್ರವಾರ, 23 ನವೆಂಬರ್ 2018 (13:27 IST)
ಬೆಂಗಳೂರು : ಆಪರೇಷನ್ ಕಮಲಕಕ್ಕೆ ಬ್ರೇಕ್ ಹಾಕಲು ದೋಸ್ತಿ ಸರ್ಕಾರ ಹಲವು ಬಿಜೆಪಿ ನಾಯಕರ ಹಾಗೂ ಕೆಲ ಪತ್ರಕರ್ತರ ಫೋನ್ ಟ್ಯಾಪಿಂಗ್  ಮಾಡಲು ಮುಂದಾಗಿದೆ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಆರೋಪ ಮಾಡಿದ್ದಾರೆ.  


ಫೋನ್ ಕದ್ದಾಲಿಕೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಲ ದಿನಗಳ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಆದರೆ ಇದೀಗ ದೋಸ್ತಿ ಸರ್ಕಾರದ ಭಾಗವಾಗಿರುವ ಜೆಡಿಎಸ್ ಈ ದೂರವಾಣಿ ಕದ್ದಾಲಿಕೆ ನಡೆಸುತ್ತಿದ್ದೆ. ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರ ಹಾಗೂ ಕೆಲ ಪತ್ರಕರ್ತರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.


ಕೆಲ ಕಾಂಗ್ರೆಸ್ ನಾಯಕರಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಬಹುದೆಂದು ಭೀತಿಯಲ್ಲಿ ಹಾಗೂ ಸರ್ಕಾರವನ್ನು ಉಳಿಸಿಕೊಳ್ಳಲು ಹಾಗೂ ಆಪರೇಷನ್ ಕಮಲಕಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಫೋನ್ ಟ್ಯಾಪಿಂಗ್ ಗೆ ಮುಂದಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡವರ ವಿಚಾರವನ್ನು ನಾನು ಪ್ರಸ್ತಾಪ ಮಾಡಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು ಯಾರ ಬಗ್ಗೆ ಗೊತ್ತಾ?