Select Your Language

Notifications

webdunia
webdunia
webdunia
webdunia

ಬರಬೇಕೆಂದೇ ರಾಜಕೀಯಕ್ಕೆ ಬರ್ತಿದ್ದೇನೆ ಎಂದ ಸುಮಲತಾ!

ಬರಬೇಕೆಂದೇ ರಾಜಕೀಯಕ್ಕೆ ಬರ್ತಿದ್ದೇನೆ ಎಂದ ಸುಮಲತಾ!
ಮಂಡ್ಯ , ಗುರುವಾರ, 21 ಫೆಬ್ರವರಿ 2019 (14:24 IST)
ಸುಮಲತಾ ಅಂಬರೀಶ್ ಕೊನೆಗೂ ರಾಜಕೀಯ ಪ್ರವೇಶದ ಕುರಿತು ಮಾತನಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆಯಲ್ಲಿ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದು, ನಾನು ರಾಜಕೀಯಕ್ಕೆ ಬರಬೇಕೆಂದು ಮಂಡ್ಯಕ್ಕೆ ಬರ್ತಿಲ್ಲ. ಮಂಡ್ಯಕ್ಕೆ ಬರಬೇಕೆಂದೇ ರಾಜಕೀಯಕ್ಕೆ ಬರ್ತಿದ್ದೇನೆ. ಅಂಬರೀಶ್ ಹುಟ್ಟೂರು ಬಿಟ್ಟರೆ ಇನ್ನೆಲ್ಲೂ ಈ ಪ್ರೀತಿ ಸಿಗಲ್ಲ. ನಾನೇನು ತೀರ್ಮಾನ ತೆಗೆದುಕೊಂಡರೂ ಅದು ನಿಮ್ಮ ಜೊತೆಯಲ್ಲೇ ಎಂದಿದ್ದಾರೆ.

ನಿಮ್ಮ ಋಣ ನಮ್ಮ ಮೇಲಿದೆ ಅದನ್ನು ತೀರಿಸಲು ನಾನು ಬದ್ಧ. ಮಂಡ್ಯ ಜನರ ಆಸೆ, ಅಪೇಕ್ಷೆಯನ್ನು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಅಂಬಿ ಪ್ರೀತಿ ವಿಶ್ವಾಸವನ್ನ ನಮ್ಮ ಕುಟುಂಬದ ಮೇಲೆ ಮುಂದುವರೆಸಿಕೊಂಡೋಗುವ ಇಚ್ಛೆಯನ್ನು ಸಿದ್ದುಗೆ ತಿಳಿಸಿದ್ದೇನೆ. ಪ್ರತಿ ಹೆಜ್ಜೆ ಬಗ್ಗೆಯೂ ನಾನು ಚಿಂತಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ನಮ್ಮನ್ನು ಗುರುತಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇನೆ. ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿಲ್ಲ. ಆದರೆ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡುವ ಬಗ್ಗೆ ಹೆಚ್ಚು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹುತಾತ್ಮ ವೀರ ಯೋಧನ ಕುಟುಂಬಕ್ಕೆ ತಿಂಗಳ ವೇತನ ನೀಡಿದ PSI