Select Your Language

Notifications

webdunia
webdunia
webdunia
webdunia

ವೃದ್ಧರಿಂದ ಎಸ್.ಬಿ.ಎಂ ಬ್ಯಾಂಕಿಗೆ ಮುತ್ತಿಗೆ

ವೃದ್ಧರಿಂದ ಎಸ್.ಬಿ.ಎಂ ಬ್ಯಾಂಕಿಗೆ ಮುತ್ತಿಗೆ
ಚಾಮರಾಜನಗರ , ಶುಕ್ರವಾರ, 18 ಜನವರಿ 2019 (16:07 IST)
ಎಸ್.ಬಿ.ಎಂ ಬ್ಯಾಂಕ್ ಗೆ ವಯೋವೃದ್ಧರು ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ ಘಟನೆ ನಡೆದಿದೆ.
ವೃದ್ಧಾಪ್ಯ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ವಯೋವೃದ್ಧರಿಂದ ಪ್ರತಿಭಟನೆ ನಡೆದಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಎಸ್ ಬಿಎಂ ಬ್ಯಾಂಕ್ ಗೆ ಮುತ್ತಿಗೆ ಹಾಕಿ ವಯೋವೃದ್ಧರು ಪ್ರತಿಭಟಿಸಿದರು.
ತಾಲೂಕಿನಲ್ಲಿರುವ ಅಂಗವಿಕಲರು ಮತ್ತು ವಯೋವೃದ್ಧರಿಗೆ ನಾಲ್ಕೈದು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಬ್ಯಾಂಕಿಗೆ ಅಲೆದು ಅಲೆದು ಸಾಕಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ವಯೋವೃದ್ಧರ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರೂ ಪ್ರತಿಭಟನೆಗೆ ಸಾಥ್ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುರ ಮಹದೇವಪ್ಪ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

 


Share this Story:

Follow Webdunia kannada

ಮುಂದಿನ ಸುದ್ದಿ

ನಡೆದಾಡುವ ದೇವರ ಆರೋಗ್ಯ ಸುಧಾರಿಸಲು ವಿಶೇಷ ಪೂಜೆ