Select Your Language

Notifications

webdunia
webdunia
webdunia
webdunia

ಹಾಲಿ ಹಾಗೂ ಮಾಜಿ ಶಾಸಕರ ಜಾತಿ ಜಗಳ ತಾರಕಕ್ಕೆ

ಹಾಲಿ ಹಾಗೂ ಮಾಜಿ ಶಾಸಕರ ಜಾತಿ ಜಗಳ ತಾರಕಕ್ಕೆ
ದಾವಣಗೆರೆ , ಶನಿವಾರ, 14 ಜುಲೈ 2018 (18:57 IST)
ಆ ಜಿಲ್ಲೆಯ ವಿಧಾನ ಸಭೆ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರ ಜಾತಿ ಜಗಳ ತಾರಕಕ್ಕೇರಿದ್ದುಒಬ್ಬರಿಗೊಬ್ಬರು ಅವ್ಯಾಚ್ಯ ಶಬ್ದಗಳಿಂದ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ಹಾಲಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ನಾಯಕ ಎಂದು ಮೀಸಲು ಕ್ಷೇತ್ರದಲ್ಲಿಚುನಾವಣೆ ನಿಂತು ಗೆದ್ದಿದ್ದಾರೆ ಎಂಬುದು ಮಾಜಿ ಶಾಸಕ ಹೆಚ್. ಪಿ. ರಾಜೇಶ್ ಆರೋಪವಾಗಿದೆಇನ್ನೂ  ಬಗ್ಗೆ ರಾಜೇಶ್ ಮೇಲೆ ಹರಿಹಾಯ್ದಿರುವ ಎಸ್.ವಿ. ರಾಮಚಂದ್ರಪ್ಪ,  ಮಾಜಿ ಶಾಸಕ ಹೆಚ್. ಪಿ. ರಾಜೇಶ್ ಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ ಕ್ಷೇತ್ರದ ಜನರೇ ನಾಯಕ ಎಂದು ಒಪ್ಪಿಕೊಂಡಿದ್ದಾರೆ.ನಾಚಿಕೆಮಾನ ಮರ್ಯಾದೆ ಇಲ್ಲದೆ ಕೋರ್ಟ್ ಗೆ ಹೋಗಿದ್ದಾರೆ ಎಂದು  ವಾಗ್ದಾಳಿ ನಡೆಸಿದ್ದಾರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್. ಪಿ.  ರಾಜೇಶ್,ರಾಮಚಂದ್ರಪ್ಪ ನಿಜವಾದ ನಾಯಕರಾದರೆ ಸಾಬೀತು ಮಾಡಲಿದಾಖಲೆ ಇದ್ದರೆ ತೋರಿಸಿ. ನನ್ನ ಬಳಿಯೂ ದಾಖಲೆ ಇದೆಕೋರ್ಟ್ ಮುಂದೆ ನಾಯಕಜಾತಿ ಬಗ್ಗೆ ಸ್ಪಷ್ಟನೆ ಕೊಡಲಿ ಎಂದು ವಾಗ್ದಾಳಿ ನಡೆಸಿದ್ದುಎಸ್. ವಿ. ರಾಮಚಂದ್ರ ನಾಯಕ ಜಾತಿಗೆ ಸೇರಿಲ್ಲ ಎಂದು ಕೋರ್ಟ್ ಮೊರೆ ಹೋಗಿರುವುದಾಗಿಹೆಚ್. ಪಿ. ರಾಜೇಶ್ ತಿರುಗೇಟು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಟೋಬರ್ ನಲ್ಲಿ ವಿಮಾನ ಹಾರಾಟ ಪ್ರಾರಂಭ: ಖರ್ಗೆ