Select Your Language

Notifications

webdunia
webdunia
webdunia
webdunia

ಗೃಹ ಸಚಿವರ ತವರಲ್ಲೇ ಕೊಲೆ, ಕಳ್ಳತನ, ಸುಲಿಗೆ ಹೆಚ್ಚಿವೆ ಎಂದ ಶಾಸಕ!

ಗೃಹ ಸಚಿವರ ತವರಲ್ಲೇ ಕೊಲೆ, ಕಳ್ಳತನ, ಸುಲಿಗೆ ಹೆಚ್ಚಿವೆ ಎಂದ ಶಾಸಕ!
ವಿಜಯಪುರ , ಮಂಗಳವಾರ, 19 ಫೆಬ್ರವರಿ 2019 (16:35 IST)
ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಗೃಹ ಸಚಿವರ ಜಿಲ್ಲೆಯಲ್ಲಿ‌ ಈ ರೀತಿಯ ಘಟನೆ ನಡೆಸುವದು‌ ಕೂಡಾ ಕೆಲವರ ಉದ್ದೇಶವಾಗಿರಬಹುದು ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸುಬಾಹು ತಂತ್ರಾಂಶಕ್ಕೆ ಚಾಲನೆ‌ ನೀಡಿದ ಬಳಿಕ ಹೇಳಿಕೆ ನೀಡಿದ್ದು, ಎಮ್.ಬಿ‌.ಪಾಟೀಲ ಗೃಹ ಸಚಿವರಾದ ಬಳಿಕ ಮೊದಲ ಬಾರಿಗೆ ಸುಬಾಹು ತಂತ್ರಾಂಶಕ್ಕೆ ಚಾಲನೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿ‌ಕಳ್ಳತನ ಕೊಲೆ, ಸುಲಿಗೆ ಹೆಚ್ಚಾಗಿದೆ. ಗೃಹ ಸಚಿವರ ಜಿಲ್ಲೆಯಲ್ಲಿ‌ ಈ ರೀತಿಯ ಘಟನೆ ನಡೆಸುವದು‌ ಕೂಡಾ ಕೆಲವರ ಉದ್ದೇಶವಾಗಿರಬಹುದು ಎಂದರು.

ಈ‌ ಹಿನ್ನೆಲೆಯಲ್ಲಿ ‌ನಗರದ ಕೆಲವೆಡೆ ಸಿಸಿ ಕ್ಯಾಮೆರಾ ಅಳವಡಿಸಬೇಕಾಗಿದೆ. ಮಹಾನಗರ ಪಾಲಿಕೆ ಹಣದಲ್ಲಿ ಕೂಡಾ ಒಂದಿಷ್ಟು ಕೆಲಸವನ್ನು‌ ಮಾಡಲು ನಾವು ಸಿದ್ದರಿದ್ದೇವೆ. ಭೂ ಮಾಪಿಯಾ, ಆಯಿಲ್ ಮಾಫಿಯಾ ಇಂದು ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇಂಟಲಿಜೆನ್ಸಿ‌ಯವರು ಈ ಕುರಿತು ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಸಿಟಿ ರವಿ ಬಗ್ಗೆ ಗಾಯಾಳು ಹೇಳಿದ್ದೇನು?