Select Your Language

Notifications

webdunia
webdunia
webdunia
webdunia

ಇಂದು ಕಾಂಗ್ರೆಸ್ ಶಾಸಕರ ಸಭೆಗೆ ಹಾಜರಾಗುತ್ತಾರಾ ಅತೃಪ್ತ ಶಾಸಕರು?

ಇಂದು ಕಾಂಗ್ರೆಸ್ ಶಾಸಕರ ಸಭೆಗೆ ಹಾಜರಾಗುತ್ತಾರಾ ಅತೃಪ್ತ ಶಾಸಕರು?
ಬೆಂಗಳೂರು , ಶುಕ್ರವಾರ, 18 ಜನವರಿ 2019 (09:52 IST)
ಬೆಂಗಳೂರು : ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ಶಾಸಕರ ಸಭೆ ಕರೆದಿದ್ದು, ಈ ಸಭೆಗೆ ಎಲ್ಲಾ ಅತೃಪ್ತ ಶಾಸಕರು ಹಾಜರಾಗುತ್ತಾರಾ? ಎಂಬ ಕುತೂಹಲಿ ಇದೀಗ ರಾಜಕೀಯ ವಲಯದಲ್ಲಿ ಮೂಡಿಸಿದೆ.


ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 3.30 ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಶಾಸಕಾಂಗ ಸಭೆಗೆ  ಎಲ್ಲಾ ಶಾಸಕರು ಹಾಜರಾಗುವಂತೆ ಖಡಕ್ ಎಚ್ಚರಿಕೆಯ ಪತ್ರ ಬರೆದಿದ್ದು, ಸಭೆಗೆ ಗೈರಾದ್ರೆ ಶಿಸ್ತು ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಿದ್ದಾರೆ.


ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅಂಡ್ ಟೀಂ ಸಭೆಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಸದ್ಯ ಮುಂಬೈನಲ್ಲಿರುವ ಉಮೇಶ್ ಜಾಧವ್ ಸಿಎಲ್ ಪಿ ಸಭೆಗೆ ಹಾಜರಾಗೋದು ಅನುಮಾನ ಎಂದು ಹೇಳಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯವರ ‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಮೆಚ್ಚಿದ ಬಿಲ್ ಗೇಟ್ಸ್