Select Your Language

Notifications

webdunia
webdunia
webdunia
webdunia

ಜಗಳವಾಡಿದ್ದಕ್ಕೆ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು

ಜಗಳವಾಡಿದ್ದಕ್ಕೆ ಸ್ನೇಹಿತನನ್ನೇ  ಕಿಡ್ನಾಪ್ ಮಾಡಿದ ಅಪ್ರಾಪ್ತ ವಿದ್ಯಾರ್ಥಿಗಳು
ಬೆಂಗಳೂರು , ಗುರುವಾರ, 24 ಜನವರಿ 2019 (06:48 IST)
ಬೆಂಗಳೂರು : ಶಾಲೆಯ ವಾರ್ಷಿಕೋತ್ಸವದ ದಿನ ಜಗಳ ಮಾಡಿದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಆತನ  ಆರು ಜನ ಸ್ನೇಹಿತರು ಅಪಹರಿಸಿ ಹಿಂಸೆ ನೀಡಿದ ಘಟನೆ ಬೆಂಗಳೂರಿನ ರಾಜಗೋಪಾಲ ನಗರದಲ್ಲಿ ನಡೆದಿದೆ.




ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ .19ರಂದು ಸಂಜೆ 7.30ಕ್ಕೆ ಮನೆಯ ಸಮೀಪದಲ್ಲಿರುವ ಖಾಸಗಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿದ್ದ. ಅಲ್ಲಿ ಈತನಿಗೂ ಮತ್ತು ಸ್ನೇಹಿತರಿಗೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.


ಎರಡು ದಿನಗಳ ಬಳಿಕ, ಸೋಮವಾರ (.21) ಸಂಜೆ 4.30ಕ್ಕೆ ಸಂತ್ರಸ್ತ ವಿದ್ಯಾರ್ಥಿ ಕಾಲೇಜು ಮುಗಿಸಿಕೊಂಡು ಗೇಟಿನ ಬಳಿ ನಿಂತಿದ್ದ ವೇಳೆ ಓಮ್ನಿ ವ್ಯಾನ್ ನಲ್ಲಿ ಬಂದ ಆರು ಜನ ಸ್ನೇಹಿತರು ಬಲವಂತವಾಗಿ ಆತನನ್ನು ವ್ಯಾನ್ ನೊಳಗೆ ಕೂರಿಸಿಕೊಂಡು ಸಮೀಪದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ ಕಾಂಪೌಂಡ್ ವೊಂದರ ಬಳಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ.

 

ಅವರಿಂದ ಹೇಗೋ ತಪ್ಪಿಸಿಕೊಂಡು ಬಂದ ವಿದ್ಯಾರ್ಥಿ ಮನೆಗೆ ತೆರಳಿ ಪಾಲಕರಿಗೆ ನಡೆದ ವಿಷಯವನ್ನು ತಿಳಿಸಿದ್ದಾನೆ. ನಂತರ ಪಾಲಕರು ಹಾಗೂ ವಿದ್ಯಾರ್ಥಿ ರಾಜಗೋಪಾಲನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ವಿದ್ಯಾರ್ಥಿ ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 6 ಮಂದಿ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಮಂದಿರಕ್ಕೆ ಕಳುಹಿಸುವುದಾಗಿ  ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

           

 


Share this Story:

Follow Webdunia kannada

ಮುಂದಿನ ಸುದ್ದಿ

ತಂಗಿಯನ್ನ ಪ್ರೀತಿಸಿದ ಯುವಕನಿಗೆ ಅಣ್ಣ ಮಾಡಿದ್ದೇನು ಗೊತ್ತಾ?