Select Your Language

Notifications

webdunia
webdunia
webdunia
webdunia

ಸಚಿವ ಡಿಕೆಶಿವಕುಮಾರ್ BSY ಗೆ ಅಭಿನಂದಿಸಿದ್ದು ಏಕೆ?

ಸಚಿವ ಡಿಕೆಶಿವಕುಮಾರ್ BSY ಗೆ ಅಭಿನಂದಿಸಿದ್ದು ಏಕೆ?
ಬೆಂಗಳೂರು , ಭಾನುವಾರ, 10 ಫೆಬ್ರವರಿ 2019 (18:17 IST)
ಬಿ.ಎಸ್.ಯಡಿಯೂರಪ್ಪನವರಿಗೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆಗಳನ್ನು ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗುರುಮಿಠಕಲ್ ಶಾಸಕರ ಪುತ್ರನೊಂದಿಗೆ ನಡೆಸಿರುವ ಆಪರೇಷನ್ ಕಮಲದ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಹೇಳುವ ಮೂಲಕ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ. ಸತ್ಯವನ್ನು ಬಹಳ ದಿನಗಳವರೆಗೆ ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದರು.

ಯಾರದೋ ಧ್ವನಿಯನ್ನು ಇನ್ಯಾರೋ ಮಿಮಿಕ್ರಿ ಮಾಡಲು ಬರುವುದಿಲ್ಲ ಎಂದ ಅವರು, ಸಿ.ಡಿ. ವಿಷಯದಲ್ಲಿ ಮುಂದಿನ ನಿರ್ಧಾರವನ್ನು ಸದನದಲ್ಲಿ ಸಭಾಧ್ಯಕ್ಷರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸದನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಾ? ಆಪರೇಷನ್ ಕಮಲ ಆಡಿಯೋ!