Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಕೆಎಸ್ ಆರ್ ಟಿಸಿ ಚಾಲಕರು!

ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಕೆಎಸ್ ಆರ್ ಟಿಸಿ ಚಾಲಕರು!
ಮಂಡ್ಯ , ಸೋಮವಾರ, 3 ಡಿಸೆಂಬರ್ 2018 (19:25 IST)
ಮಂಡ್ಯದಲ್ಲಿ ಹಿರಿಯ ಅಧಿಕಾರಿಗಳ ಕುರುಕುಳಕ್ಕೆ KSRTC ಚಾಲಕರು ಬೇಸತ್ತು ಒಬ್ಬೊಬ್ಬರೆ ಆತ್ಮಹತ್ಯೆ ಗೆ ಯತ್ನಿಸುತ್ತಿದ್ದು, ಇಂದು ಕೂಡ ಮಂಡ್ಯದ ಮತ್ತೊಬ್ಬ KSRTC ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಮೊನ್ನಯಷ್ಟೆ ಮಂಡ್ಯದ ಮಳವಳ್ಳಿ ಡಿಪೋದ ಚಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಅದೇ ತಾಲೂಕಿನ ಮತ್ತೋರ್ವ KSRTC ಚಾಲಕ ಲೋಕೇಶ್ ಎಂಬಾತ ಕೂಡ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. 

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಜನೂರು ಗ್ರಾಮದ KSRTC ಚಾಲಕ ಲೋಕೇಶ್ ನಿಂದ ಆತ್ಮಹತ್ಯೆ ಯತ್ನ ನಡೆದಿದ್ದು,  ಮಳವಳ್ಳಿ‌ ತಾಲೂಕಿನ KSRTC ಬಸ್ ಡಿಪೋದಲ್ಲಿ‌‌ ಚಾಲಕರ ಮೇಲೆ ನಿರಂತರ ಕಿರುಕುಳ ನಡೆಯುತ್ತಿದೆಯಾ? ಅನ್ನೋ ಅನುಮಾನ ವ್ಯಕ್ತವಾಗಿದೆ. ಮೊನ್ನೆಯಷ್ಟೆ  ಕಾಗೇಪುರ ಗ್ರಾಮದ KSRTC  ಚಾಲಕ ವೆಂಕಟೇಶ್ ಕೂಡ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಸಿ.ಎಂ. ಗೆ ಪತ್ರ ಬರೆದು ವಿಷ ಸೇವಿಸಿದ್ದರು. ಆ ಪ್ರಕರಣ ಮಾಸುವ ಮೊದಲೇ ಮತ್ತೊಬ್ಬ ಚಾಲಕ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಮೀನನ ಬಳಿ ವಿಷ ಸೇವಿಸಿ ಒದ್ದಾಡುತ್ತಿದ್ದ ಚಾಲಕನನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರವಾನಿಸಲಾಗಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರದ ವಿರುದ್ಧ ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶ