Select Your Language

Notifications

webdunia
webdunia
webdunia
webdunia

ಓಟ್ ಹಾಕದಿರೋದಕ್ಕೆ ಚಾಕು ಇರಿದ ಭೂಪ!

ಓಟ್ ಹಾಕದಿರೋದಕ್ಕೆ ಚಾಕು ಇರಿದ ಭೂಪ!
ಕೊಪ್ಪಳ , ಸೋಮವಾರ, 3 ಸೆಪ್ಟಂಬರ್ 2018 (18:32 IST)
ಮತ ಹಾಕದ್ದಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಅಭ್ಯರ್ಥಿಯ ಸಂಬಂಧಿ ಮಹಿಳೆಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಮತ ಹಾಕದ್ದಕ್ಕೆ  ಚಾಕು ಹಾಕಿದ ಭೂಪ!. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ ಅಭ್ಯರ್ಥಿಯ ಮೈದುನನೊಬ್ಬ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಕೊಪ್ಪಳದ  19ನೇ ವಾರ್ಡಿನಲ್ಲಿ ಘಟನೆ ನಡೆದಿದೆ.

ರೆಹಮತ್ ಬೀ (65) ಮಹಿಳೆಗೆ ಚಾಕುವಿನಿಂದ  ಸೈಯದ್ ನಿಜಾಮುದ್ದೀನ್ ಹಾಗೂ ಸೈಯದ್ ಸಿರಾಜುದ್ದೀನ್ ಹುಸೇನಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಈ ವಾರ್ಡಿನಲ್ಲಿ ಜೆಡಿಎಸ್- ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ಹಣಾಹಣಿಯಿತ್ತು. ಜೆಡಿಎಸ್ ಅಭ್ಯರ್ಥಿ ಆಯಿಷಾ ರುಬಿನಾ ಗೆಲುವು ಸಾಧಿಸಿದ ಹಿನ್ನೆಲೆ ಹತಾಶೆಗೊಂಡ ಕಾಂಗ್ರೆಸ್ ನ ಅಭ್ಯರ್ಥಿ ಸೈಯದ್ ನಾಜಿಯಾ ಹಾಜಿ ಹುಸೇನಿಯ ತಮ್ಮಂದಿರು ಈ ಮಹಿಳೆಗೆ ಚಾಕು ಚುಚ್ಚಿದ್ದಾರೆ. ಮನೆಗೆ ನುಗ್ಗಿ  ಅವಾಚ್ಯ ಶಬ್ದಗಳಿಂದ ಬೈದು ಗಂಡಸರಿಗಾಗಿ ಹುಡುಕಾಡಿದ್ದಾರೆ. ಯಾರೂ ಸಿಗದ ಹಿನ್ನೆಲೆ ಮಹಿಳೆಗೆ ಚಾಕುವಿನಿಂದ ಚುಚ್ಚಿದ್ದಾರೆ. ಹೀಗಾಗಿ ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು, ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಗದಗದಲ್ಲಿ ಪ್ರಾಬಲ್ಯ ಮೆರೆದ ಕಾಂಗ್ರೆಸ್