Select Your Language

Notifications

webdunia
webdunia
webdunia
webdunia

ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣ: ಸ್ವಾಮೀಜಿ ಶಿಷ್ಯನ ಬಂಧನ

ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣ: ಸ್ವಾಮೀಜಿ ಶಿಷ್ಯನ ಬಂಧನ
ಮೈಸೂರು , ಶುಕ್ರವಾರ, 21 ಸೆಪ್ಟಂಬರ್ 2018 (16:30 IST)
ಪತ್ರಕರ್ತನ ಪತ್ನಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧಿಸಿದಂತೆ ಆರೋಪಿ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಬಂಧನವಾಗಿದೆ.

ಕುವೆಂಪುನಗರ ಪೊಲೀಸರಿಂದ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಪತ್ರಕರ್ತ ರಾಜೇಶ್ ಬೋರೆ ಪತ್ನಿ 
ಲೈಂಗಿಕ ಕಿರುಕುಳಕ್ಕೆ ಪತಿ ಸಹಕಾರ ನೀಡಿದ ಆರೋಪ ಪತ್ನಿಯಿಂದ ಕೇಳಿಬಂದಿದೆ.

ಸ್ವಾಮೀಜಿ, ರಾಜೇಶ್ ಬೋರೆ ಹಾಗೂ ಇತರ 5 ಮಂದಿಯಿಂದ ಕಿರುಕುಳ ನೀಡಿದ್ದರೆಂದು ಆರೋಪಿಸಿರುವ ಗೃಹಿಣಿ ದೂರು ದಾಖಲಿಸಿದ್ದಳು. ಸೆಪ್ಟೆಂಬರ್ 4 ರಂದು ಘಟನೆ ನಡೆದಿತ್ತು. ಸೆಪ್ಟೆಂಬರ್ 7 ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ದಿನದಿಂದ ಸ್ವಾಮೀಜಿ ಹಾಗೂ ರಾಜೇಶ್ ಬೋರೆ ನಾಪತ್ತೆಯಾಗಿದ್ದಾರೆ. ಘಟನೆ ನಡೆದ ವೇಳೆ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಸಹ ಇದ್ದರು. ಅನಿಲ್ ಆಚಾರ್ಯರನ್ನ ಸಂತ್ರಸ್ತೆ ಗುರುತಿಸಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಭಾರಿ ಮಳೆಗೆ ಜನರು ಕಂಗಾಲು