Select Your Language

Notifications

webdunia
webdunia
webdunia
webdunia

ಹಾಡುಹಗಲೇ ಗೃಹಿಣಿ ಕೊಲೆ ಮಾಡಿದ್ದ ಆರೋಪಿ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

ಹಾಡುಹಗಲೇ ಗೃಹಿಣಿ ಕೊಲೆ ಮಾಡಿದ್ದ ಆರೋಪಿ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?
ಕಲಬುರಗಿ , ಶನಿವಾರ, 17 ನವೆಂಬರ್ 2018 (19:57 IST)
ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ಹಾಡು ಹಗಲೇ ಮನೆಯಲ್ಲಿದ್ದ ಗೃಹಿಣಿ ಕೊಲೆ ಮಾಡಿ ಹಣ, ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿಗೆ ಆತ ಬಿಟ್ಟು ಹೋದ ಸುಳಿವೇ ಆತನ ಬಂಧನಕ್ಕೆ ಕಾರಣವಾಗಿದೆ.

ಕಲಬುರಗಿಯ ರಾಮನಗರದಲ್ಲಿ ಈಚೆಗೆ ನಡೆದ ಗೃಹಿಣಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೃಹಿಣಿಯನ್ನು ಕೊಲೆ ಮಾಡಿದ್ದ ಆಕೆಯ ಸಂಬಂಧಿಕನೇ ಆಗಿರುವ ಶಿವಾಜಿನಗರದ ಕೃಷ್ಣ, ತಾವು ಬಿಟ್ಟು ಹೋದ ಸುಳಿವಿನಿಂದಲೇ ಈಗ ಬಂಧನಕ್ಕೆ ಒಳಗಾಗಿದ್ದಾನೆ.

ಮನೆಯಲ್ಲಿದ್ದ ಗೃಹಿಣಿಯನ್ನು ಕೊಲೆ ಮಾಡಿದ್ದ ಕೃಷ್ಣ ಆ ಬಳಿಕ ಹಣ, ಚಿನ್ನಾಭರಣ ಮತ್ತು ಮೊಬೈಲ್ ಕದ್ದುಕೊಂಡು ಹೋಗಿದ್ದನು. ಈ ಕೊಲೆಯನ್ನು ಕಳ್ಳತನಕ್ಕಾಗಿ ಮಾಡಿರುವ ಕೊಲೆ ಎಂದು ಬಿಂಬಿಸಲಾಗಿತ್ತು. ಆದರೆ ಆರೋಪಿಯು ಕೊಲೆ ನಡೆದ ಸ್ಥಳದಲ್ಲಿಯೇ ಕೈ ಗಡಿಯಾರವನ್ನು ಬಿಟ್ಟು ಹೋಗಿದ್ದನು. ಆ ಸುಳಿವಿನಿಂದ ಬೆನ್ನು ಹತ್ತಿದ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲೂರಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಭೇಟಿ