Select Your Language

Notifications

webdunia
webdunia
webdunia
webdunia

ವರುಣನ ಅರ್ಭಟ: ತತ್ತರಿಸಿದ ತುಮಕೂರು ಜಿಲ್ಲೆಯ ಜನತೆ

ವರುಣನ ಅರ್ಭಟ: ತತ್ತರಿಸಿದ ತುಮಕೂರು ಜಿಲ್ಲೆಯ ಜನತೆ
ತುಮಕೂರು , ಮಂಗಳವಾರ, 5 ಜೂನ್ 2018 (14:10 IST)
ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನಲ್ಲಿ ಎರಡು ದಿನಗಳಿಂದಲೂ ನಿಲ್ಲದ ವರುಣನ ಅರ್ಭಟದಿಂದಾಗಿ ಹಳ್ಳಕೊಳ್ಳಗಳು ಮೈದುಂಬಿ ಭಾರೀ ಪ್ರಮಾಣದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಕೆಲ ಗ್ರಾಮಗಳ ರಸ್ತೆ ಸಂಪರ್ಕ ಕಡಿದು ಹೋಗಿದೆ ಎಂದು ಮೂಲಗಳು ತಿಳಿಸಿವೆ. 
ಮಧುಗಿರಿತಾಲೂಕಿನ ದೊಡ್ಡಮಾಲೂರು ಸಮೀಪದ ಮೇಲುಕುಂಟೆ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದು.
ಎಂಟು ವರ್ಷಗಳ ನಂತರ ಮೇಲ್ಕುಂಟೆ ಹಳ್ಳ ಮೈದುಂಬಿ ಹರಿಯುತ್ತಿದೆ ಎನ್ನಲಾಗಿದೆ. 
 
ಇದರಿಂದಾಗಿ ಶ್ರಾವಂಡನಹಳ್ಳಿ, ಕಲಿದೇವಪುರ, ವಡ್ಡರಹಟ್ಟಿ ಗ್ರಾಮಗಳಿಗೆ ತೆರಳಲು ರಸ್ತೆ ಸಂಪರ್ಕ ಬಂದ್ ಆಗಿದ್ದರಿಂದ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೋಲಿಸ್ ಅಧಿಕಾರಿಯಿಂದ ಮಹಿಳೆಗೆ ನಿಂದನೆ: ವ್ಯಾಪಕ ಆಕ್ರೋಶ