Select Your Language

Notifications

webdunia
webdunia
webdunia
webdunia

ಪ್ರೀತಿ ನಿರಾಕರಿಸಿದವಳ ತಂಗಿಯನ್ನು ಮದುವೆಯಾದವನಿಂದ ಕಿರುಕುಳ

ಪ್ರೀತಿ ನಿರಾಕರಿಸಿದವಳ ತಂಗಿಯನ್ನು ಮದುವೆಯಾದವನಿಂದ ಕಿರುಕುಳ
ಬೆಂಗಳೂರು , ಬುಧವಾರ, 24 ಜನವರಿ 2018 (09:30 IST)
ಅಕ್ಕ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ತಂಗಿಯನ್ನು ಮದುವೆಯಾಗಿರುವ ವ್ಯಕ್ತಿ ಪತ್ನಿಗೆ ಕಿರುಕುಳ ನೀಡುವ ಮೂಲಕ ಸೇಡು ತೀರಿಸಿಕೊಳ್ಳುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಪತಿಯ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಬಿಂದುಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬೆಂಗಳೂರಿನ ಪಿಣ್ಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಚಂದ್ರಶೇಖರ ಆರೋಪಿಯಾಗಿದ್ದಾನೆ. 

ಪತ್ನಿ ಬಿಂದುಶ್ರೀಯನ್ನು ಪ್ರೀತಿಸಿ ಎಂಟು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಾನೆ. ಮದುವೆಯ ನಂತರ ನಿರಂತರವಾಗಿ ಕಿರುಕುಳ ನೀಡುತ್ತಿರುವ ಚಂದ್ರಶೇಖರ ಮದುವೆ ಮಾಡಿಕೊಂಡಿರುವುದು ನಿನ್ನ ಅಕ್ಕನ ಮೇಲಿನ ಸೇಡು ತೀರಿಸಿಕೊಳ್ಳೋಕೆ ಎಂದು ಪತ್ನಿಗೆ ತಿಳಿಸಿದ್ದ.

ನಾಲ್ಕು ವರ್ಷಗಳ ಹಿಂದೆ ಬಿಂದುಶ್ರೀ ಅಕ್ಕನನ್ನು ಪ್ರೀತಿಸಿದ್ದ, ಆದರೆ, ಆಕೆ ನಿರಾಕರಿಸಿದ್ದಳು. ನಂತರ ತಂಗಿಯನ್ನು ಪ್ರೀತಿ ಮಾಡಿದ್ದಾನೆ. ಅಕ್ಕ ವಿರೋಧದ ನಡುವೆಯೂ ತಂಗಿಯನ್ನು ಮದುವೆಯಾಗಿ ಸೇಡು ಸೇಡು ತೀರಿಸಿಕೊಂಡಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಕೊಳ್ಳಿ!