Webdunia - Bharat's app for daily news and videos

Install App

ನಗರಸಭಾ ಸದಸ್ಯನ ಕೈಯಲ್ಲಿ ಅರಳಿದ ಗಣಪ

Webdunia
ಬುಧವಾರ, 12 ಸೆಪ್ಟಂಬರ್ 2018 (15:34 IST)
ಕಳೆದ ಎರಡು ತಿಂಗಳಿಂದ ರಂಗೇರಿದ್ದ  ನಗರಸಭಾ ಚುನಾವಣೆ ಕಣದಲ್ಲಿದ್ದು, ಟಿಕೆಟ್, ನಾಮಪತ್ರ, ಪ್ರಚಾರ, ಮತದಾನ ಹೀಗೆ ಪ್ರತಿನಿತ್ಯ ಬ್ಯೂಸಿಯಾಗಿರುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ನಂದನಗದ್ದಾದ 26 ನೇ ವಾರ್ಡ್ ಸದಸ್ಯ ನಂದಾ ನಾಯ್ಕ ತಮ್ಮ ಸಹೋದರ ಘನಶ್ಯಾಮ ನಾಯ್ಕ ಜತೆಗೂಡಿ ವಂಶಪಾರಂಪರ್ಯವಾಗಿ ಬಂದಂತ ಕಸುಬನ್ನು ಮುಂದುವರಿಸಿದ್ದಾರೆ.

ನಂದಾ ಹಾಗೂ ಘನಶ್ಯಾಮ ಇಬ್ಬರು ಪದವೀಧರರು.  ಅಡುಗೆ ಗುತ್ತಿಗೆ, ಶಾಮಿಯಾನ ಡೆಕೊರೆಸನ್ ಮಾಡುತ್ತಾರೆ. ಇದರ ನಡುವೆ ಬಳುವಳಿಯಾಗಿ ಬಂದಂತ ಮೂರ್ತಿ ತಯಾರಿಕೆಯನ್ನು ಮಾಡುತಿದ್ದು, ಕಳೆದೊಂದು ತಿಂಗಳಿನಿಂದ ಚುನಾವಣಾ ಒತ್ತಡದ ನಡುವೆ 6೦ಕ್ಕೂ ಹೆಚ್ಚು ಗಣಪತಿ ಮೂರ್ತಿ ತಯಾರಿಸಿದ್ದಾರೆ. ಅಲ್ಲದೆ ಕಳೆದ ಐದು ದಿನಗಳಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕುಮಟಾ ಹಾಗೂ ನಂದನಗದ್ದಾದಿಂದ ತಂದಂತಹ  ಮಣ್ಣನ್ನು ಬಳಸಿ ಮೂರ್ತಿಗಳನ್ನು ತಯಾರಿಸಲಾಗಿದೆ. ಅಲ್ಲದೆ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಬಳಿದಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿ ಗಮನ ಸೆಳೆಯುತ್ತಿವೆ. ಜತೆಗೆ ಗೌರಿ, ಶಾರದಾ, ದುರ್ಗಾ ಮೂರ್ತಿಯನ್ನು ತಯಾರಿಸುವ ಅವರು ಮಾಘ ಚತುರ್ಥಿಗೂ ಗಣಪತಿಗಳನ್ನು ಮಾಡಿಕೊಡುವುದು ವಿಶೇಷ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments