Select Your Language

Notifications

webdunia
webdunia
webdunia
webdunia

ಇಂಧನ ಬೆಲೆ ಏರಿಕೆಯಾಗಿದ್ದೆ ಅಚ್ಛೇದಿನ್ ? ಎಂದು ಕೇಳಿದ ಸಚಿವ

ಇಂಧನ ಬೆಲೆ ಏರಿಕೆಯಾಗಿದ್ದೆ ಅಚ್ಛೇದಿನ್ ? ಎಂದು ಕೇಳಿದ ಸಚಿವ
ಹುಬ್ಬಳ್ಳಿ , ಬುಧವಾರ, 5 ಸೆಪ್ಟಂಬರ್ 2018 (15:28 IST)
ಪ್ರಧಾನಿ ಮೋದಿ ಅಚ್ಛೆ ದಿನ್ ಅಂದಿದ್ರು, ದೇಶದಲ್ಲಿ ಪೆಟ್ರೋಲ್ ಡೀಜಲ್ ಬೆಲೆ ಗಗನಕ್ಕೇರಿದೆ. ಇದೇನಾ ಅಚ್ಛೆ ದಿನ್? ಎಂದು ಸಚಿವ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದು, ಇಂಧನ ಬೆಲೆ ಹೆಚ್ಚಾಗಿದೆ. ಆದ್ರೂ ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿದೆ. ಮೋದಿ ಮನ್ ಕೀ ಬಾತ್ ಅಂತಿದ್ರು , ನಮಗೆ ಮನ್ ಕೀ ಬಾತ್ ಬೇಕಿಲ್ಲ ಕಾಮ್ ಕೀ ಬಾತ್ ಬೇಕು‌‌.
ಜನರಿಗೆ ಕೇಂದ್ರ ಸರ್ಕಾರದ ಆಡಳಿತ ವೈಖರಿ ಅರಿವಾಗಲಿ ಅಂತ ಸುಮ್ಮನಿದ್ದೇವೆ ಎಂದರು.

ಜನರಿಗೆ ಕೇಂದ್ರ ಸರ್ಕಾರ ಡೀಜಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ‌ ಕುರಿತು ಅರ್ಥವಾಗಬೇಕು. ನಾವು ಹಿಂದಿನಿಂದಲೂ ತೈಲ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೇವೆ. ಸತ್ಯ ಜನರಿಗೆ ಅರ್ಥ ಆಗಲಿ ಎಂದು ಸುಮ್ಮನಿದ್ದೇವೆ.

ಮಾತೆತ್ತಿದ್ದರೆ ಸರ್ಕಾರ ಬೀಳುತ್ತೆ ಬೀಳುತ್ತೆ ಅಂತ ಹೇಳ್ತಾನೆ ಬರ್ತಿದಾರೆ. ಮೈತ್ರಿ ಸರ್ಕಾರ ಬಿಳೋದಿಲ್ಲ,‌ ಐದು ವರ್ಷ ಆಡಳಿತ ನಡೆಸುತ್ತದೆ. ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಘೋಷಣೆಯಾದ ಎಲ್ಲಾ ಯೋಜನೆಗಳು ಈ ಸರ್ಕಾರ ಮುಂದುವರೆಸುತ್ತೆ ಎಂದೂ ಸಚಿವ ಜಮೀರ್ ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್‌ಕದಮ್ ನೀಡಿದ ಹೇಳಿಕೆಗೆ ಭಾರೀ ವಿರೋಧ!