Select Your Language

Notifications

webdunia
webdunia
webdunia
webdunia

ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಬಡ ರೈತ ಕುಟುಂಬದ ಜಮೀನು ಕಬಳಿಸಲು ಹುನ್ನಾರ?

ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಬಡ ರೈತ ಕುಟುಂಬದ ಜಮೀನು ಕಬಳಿಸಲು ಹುನ್ನಾರ?
ಮಂಡ್ಯ , ಬುಧವಾರ, 5 ಸೆಪ್ಟಂಬರ್ 2018 (15:01 IST)
ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಮೋಟಮ್ಮ ಪತಿ ವೆಂಕಟರಾಮು ಎನ್ನುವವರು ಬಡ ರೈತ ಕುಟುಂಬದ ಜಮೀನು ಕಬಳಿಸಲು ಹುನ್ನಾರ ನಡೆಸಿರುವ ಆರೋಪ ಮಂಡ್ಯದಲ್ಲಿ ಕೇಳಿ ಬಂದಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ರಾಜಿಯಾಗದಿದ್ದರೆ ನಿಮ್ಮ ಜಮೀನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಿದ್ದು, ಮೋಟಮ್ಮ ಕುಟುಂಬದ ಬೆದರಿಕೆಯಿಂದ ಕುಟುಂಬವೊಂದು ದಯಾಮರಣಕ್ಕೆ ಅಂಗಲಾಚಿದೆ. ತನ್ನ ಸಂಬಂಧಿಗಳು ಆರೋಪಿಗಳಾಗಿರುವ ಕ್ರಿಮಿನಲ್ ಪ್ರಕರಣವೊಂದನ್ನು ರಾಜಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ತೋಟಿ ಇನಾಮ್ತಿಯಲ್ಲಿ ಜಮೀನು ಮಂಜೂರಾಗಿದ್ದು, ಜಂಟಿ ಖಾತೆಯಲ್ಲಿರುವ ಜಮೀನಿನಲ್ಲಿ ಬೇಸಾಯಕ್ಕೆ ಅವಕಾಶ ಕೊಡಲ್ಲ ಎಂದು ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಮೋಟಮ್ಮ ಪತಿ ವೆಂಕಟರಾಮು ತಮ್ಮ ಸಹೋದರ ಸಂಬಂಧಿ ನಾಗರಾಜು ಕುಟುಂಬಕ್ಕೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಂಥದ್ದೊಂದು ಪ್ರಕರಣ ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದ್ದು, ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ತಮಗೆ ಕಿರುಕುಳ ಕೊಡ್ತಿದ್ದಾರೆ. ಹೀಗಾಗಿ ದಯಾ ಮರಣ ನೀಡಿ  ಎಂದು ವೆಂಕಟರಾಮು ಅವರ ದಾಯಾದಿ ಕುಟುಂಬದ ಎಸ್.ನಾಗರಾಜು, ಪತ್ನಿ ಚಂದ್ರಮ್ಮ ಹಾಗೂ ಪುತ್ರ ಶಿವಶಂಕರ್ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನೀವು ಬಳಸುವ ಉಪ್ಪಿನಲ್ಲಿ ಪ್ಲಾಸ್ಟಿಕ್ ಹೇಗೆ ಸೇರುತ್ತೆ ಗೊತ್ತಾ?