Select Your Language

Notifications

webdunia
webdunia
webdunia
webdunia

ಮೈತ್ರಿ ಪಕ್ಷಗಳಿಗೆ ಬುದ್ದಿ ಕಲಿಸಿ ಎಂದ ಮಾಜಿ ಸಿಎಂ

ಮೈತ್ರಿ ಪಕ್ಷಗಳಿಗೆ ಬುದ್ದಿ ಕಲಿಸಿ ಎಂದ ಮಾಜಿ ಸಿಎಂ
ಬಾಗಲಕೋಟೆ , ಸೋಮವಾರ, 29 ಅಕ್ಟೋಬರ್ 2018 (18:32 IST)
ವಾಲ್ಮೀಕಿ ಸಮುದಾಯಕ್ಕೆ ಅವಮಾನವನ್ನು ಕಾಂಗ್ರೆಸ್, ಜೆಡಿಎಸ್ ನವರು ಮಾಡಿದ್ದಾರೆ. ಹೀಗಾಗಿ ಮೈತ್ರಿ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಜನರು ಒಂದೂ ಮತವನ್ನು ಕೊಡಬಾರದು. ಕೊಟ್ಟರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯಮಾಡಿದಂತೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಜಯಂತಿಯಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಾಲ್ಮೀಕಿ ಪ್ರಶಸ್ತಿಯನ್ನು ಸ್ವೀಕರಿಸದೆ ಅವಮಾನ ಮಾಡಿದ್ದಾರೆ. ಇದು ಸಾಲದೇ ಎಂದು ಪ್ರಶ್ನಿಸಿರುವ ಅವರು, ಮೈತ್ರಿ ಪಕ್ಷಗಳಿಗೆ ಮತ ಹಾಕದಂತೆ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಗಡಿಪಾರು ಮಾಡಲು ವಾಟಾಳ್ ಆಗ್ರಹ ಮಾಡಿದ್ದೇಕೆ ಗೊತ್ತಾ?