Select Your Language

Notifications

webdunia
webdunia
webdunia
webdunia

ಆನೆ ದಾಳಿಗೆ ಮಲೆನಾಡಿಗರು ಕಂಗಾಲು

ಆನೆ ದಾಳಿಗೆ ಮಲೆನಾಡಿಗರು ಕಂಗಾಲು
ಚಿಕ್ಕಮಗಳೂರು , ಬುಧವಾರ, 29 ಆಗಸ್ಟ್ 2018 (13:52 IST)
ಒಂದೆಡೆ ಅತೀ ಮಳೆಯಿಂದಾಗಿ ಬೆಳೆದ ಬೆಳೆಗಳೆಲ್ಲ ನಾಶವಾದರೆ, ಇನ್ನೊಂದೆಡೆ ಅಲ್ವ ಸ್ವಲ್ಪ ಅಳಿದು ಉಳಿದ ಬೆಳೆಗಳನ್ನು ಕಾಡಾನೆ ದಾಳಿಯಿಂದ ಉಳಿಸಿಕೊಳ್ಳಲಾಗದೆ ಬೆಳೆಗಾರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ಮಲೆನಾಡಿನ ರೈತರು ಒಂದೆಡೆ ಮಳೆಯಿಂದ ಈಗಾಗಲೇ ಕಂಗಲಾಗಿದ್ದಾರೆ. ಈಗ ವನ್ಯಪ್ರಾಣಿಗಳ ಹಾವಳಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವಂತೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗುತ್ತಿಹಳ್ಳಿ, ಮೂಲರಹಳ್ಳಿ, ಬೈರಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆ ಹಾವಳಿಯಿಂದ ಬಾಳೆ, ಕಾಫಿ, ಮೆಣಸು, ಭತ್ತ ಸಂಪೂರ್ಣ ನಾಶವಾಗಿದೆ.

ರಾತ್ರಿ ವೇಳೆ ಆನೆಗಳು ದಾಳಿ ಮಾಡಿ   ಮೂಲರಹಳ್ಳಿ ರಘು ಹಾಗೂ ನಾಲ್ಕೈದು ಜನರ ತೋಟದ ಬಾಳೆ ಹಾಗೂ ಕಾಫಿ ಬೆಳೆ ನಾಶಮಾಡಿವೆ. ಹಲವಾರು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆಗಳಲ್ಲಿ ಇವುಗಳು ಈಜಾಡಿದರೆ ಆಮ್ಲಜನಕ ಹೆಚ್ಚಾಗುತ್ತದೆಯಂತೆ! ಈ ವಿಚಿತ್ರ ಹೇಳಿಕೆ ನೀಡಿದವರು ಯಾರು?