Select Your Language

Notifications

webdunia
webdunia
webdunia
webdunia

ಮೈತ್ರಿ ಸರಕಾರ ಭವಿಷ್ಯ: ಕಾಂಗ್ರೆಸ್ ಮುಖಂಡನಿಂದ ಹೊರಬಿತ್ತು ದ್ವಂದ್ವ ಮಾತು

ಮೈತ್ರಿ ಸರಕಾರ ಭವಿಷ್ಯ: ಕಾಂಗ್ರೆಸ್ ಮುಖಂಡನಿಂದ ಹೊರಬಿತ್ತು ದ್ವಂದ್ವ ಮಾತು
ಮಂಡ್ಯ , ಗುರುವಾರ, 20 ಸೆಪ್ಟಂಬರ್ 2018 (15:58 IST)
ಮೈತ್ರಿ ಸರ್ಕಾರ ಇರುತ್ತೋ ಬೀಳುತ್ತೋ ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ದ್ವಂದ್ವ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎನ್. ಚಲುವರಾಯಸ್ವಾಮಿ ಅವರು, ಪರೋಕ್ಷವಾಗಿ ಸರ್ಕಾರ ಬೀಳುತ್ತೆ ಅನ್ನೋ ಹೇಳಿಕೆ ಕೊಟ್ಟಿದ್ದು, ಕಟ್ಟೆಯಲ್ಲಿ ಸ್ವಲ್ಪ ಜಾಗ ಆದ್ರೂ ನೀರು ಹೊರಟು ಹೋಗುತ್ತೆ ಎಂಬ ಮಾತನ್ನು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗ್ತಾರೆ ಎಂದು ಹೇಳಿದರು. ಮಂಡ್ಯ ಜನ ಐದು ವರ್ಷ ಬಾಯಿ ಬಿಡಬೇಡಿ ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನಾವು ಸರ್ಕಾರ ಬಿದ್ದರೂ ಇದ್ದರೂ ತಲೆ ಕೆಡಿಸಿಕೊಳ್ಳಲ್ಲ. ಈ ಹಿಂದೆ ಎನ್.ಧರಂಸಿಂಗ್ ಮೈತ್ರಿ ಸರ್ಕಾರವನ್ನ ಬೀಳಿಸಿದ್ದೆವು. ಬಿ.ಎಸ್.ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೇವು. ಇದಕ್ಕೆಲ್ಲಾ ಮೈತ್ರಿ ಸರ್ಕಾರವೇ ಕಾರಣ. ಒಂದು ಪಕ್ಷಕ್ಕೆ ಬಹುಮತ ಕೊಟ್ರೆ ಹೀಂಗೆ ಆಗಲ್ಲ ಎಂದ್ರು. ವಿಧಾನ ಪರಿಷತ್ ಅಭ್ಯರ್ಥಿಗೆ ನಾನು ಆಕಾಂಕ್ಷಿಲ್ಲ ಅಲ್ಲ ಎಂದ ಅವ್ರು, ಪಕ್ಷ ಸೇರಿ ಒಂದು ವರ್ಷ ಆಗಿಲ್ಲ ಯಾವ ನೈತಿಕತೆ ಆಧಾರದಲ್ಲಿ ನಾನು ಎಂ.ಎಲ್.ಸಿ. ಕೇಳಲಿ ಎಂದ್ರು.

 




Share this Story:

Follow Webdunia kannada

ಮುಂದಿನ ಸುದ್ದಿ

ಹೊಡಿರಿ, ಬಡಿರಿ ಎಂದ ಕಾಂಗ್ರೆಸ್ ಮಾಜಿ ಸಚಿವ