Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆಹುತಿಯಾದ ಭೂಪ

ಕುಡಿದ ಮತ್ತಿನಲ್ಲಿ ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆಹುತಿಯಾದ ಭೂಪ
ಬೆಂಗಳೂರು , ಸೋಮವಾರ, 29 ಅಕ್ಟೋಬರ್ 2018 (10:17 IST)
ಬೆಂಗಳೂರು: ನಗರದ ತಲಘಟ್ಟಪುರದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನಗೆ ತಾನು ಬೆಂಕಿ ಹಚ್ಚಿಕೊಂಡಿದ್ದಲ್ಲದೆ, ತನ್ನಿಬ್ಬರು ಮಕ್ಕಳನ್ನೂ ಬೆಂಕಿಗೆ ಆಹುತಿ ಮಾಡಿದ್ದಾನೆ.

ದುರದೃಷ್ಟವಶಾತ್ ಘಟನೆಯಲ್ಲಿ ಒಂದೂವರೆ ವರ್ಷದ ಕಿರಿ ಮಗ ಸಾವನ್ನಪ್ಪಿದ್ದು, ಇನ್ನೊಂದು ಮಗು ಮತ್ತು ಆರೋಪಿಗೆ ಗಾಯಗಳಾಗಿವೆ.  ಆರೋಪಿಯನ್ನು ಶ್ರೀನಿವಾಸ ಮೂರ್ತಿ ಎಂದು ಗುರುತಿಸಲಾಗಿದೆ.

ಮದ್ಯಪಾನ ಬಿಟ್ಟು ಬಿಡುವಂತೆ ಪತ್ನಿ ಎಷ್ಟು ಹೇಳಿದರೂ ಈತ ಕಿವಿಗೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಪತ್ನಿ ಕೋಪಿಸಿಕೊಂಡು ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಶ್ರೀನಿವಾಸ ಮೂರ್ತಿ ತನ್ನ ಹಾಗೂ ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಕೃತ್ಯವೆಸಗಿದ್ದಾನೆ. ಆದರೆ ಮಕ್ಕಳ ಕಿರುಚಾಟ ಕೇಳಿ ನೆರೆಮನೆಯವರು ಧಾವಿಸಿ ಬೆಂಕಿ ನಂದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಸ್ಟೇಷನ್ ಗೆ ಮಗುವನ್ನು ಕರೆದೊಯ್ದು ಕೆಲಸ ಮಾಡಿದ ಮಹಿಳಾ ಪೇದೆಗೆ ಸಿಕ್ಕ ಬಹುಮಾನವೇನು ಗೊತ್ತಾ?