Select Your Language

Notifications

webdunia
webdunia
webdunia
webdunia

ಬ್ಯಾಂಕ್ ನೋಟೀಸ್ ಗೆ ಸಚಿವ ಹೇಳಿದ್ದೇನು ಗೊತ್ತಾ?

ಬ್ಯಾಂಕ್ ನೋಟೀಸ್ ಗೆ ಸಚಿವ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಸೋಮವಾರ, 19 ನವೆಂಬರ್ 2018 (18:11 IST)
ರಾಜ್ಯದ ರೈತರಿಗೆ ನೋಟೀಸ್ ನೀಡಬೇಡಿ. ಹೀಗಂತ ಸಹಕಾರ ಸಚಿವ ಬ್ಯಾಂಕ್ ಗಳಿಗೆ ಹೇಳಿದ್ದಾರೆ.

ರೈತರಿಗೆ ಸಾಲ ವಾಪಸ್ ನೀಡಲು ನೋಟೀಸ್ ನೀಡಿರುವ ಆಕ್ಸಿಸ್ ಬ್ಯಾಂಕ್ಗೆ ಇನ್ಮುಂದೆ ನೋಟೀಸ್ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರೈತರು ನಡೆಸುತ್ತಿದ್ದ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವರು, ಸಾಲ ವಾಪಸಾತಿಗೆ ನೋಟೀಸ್ ನೀಡದಂತೆ, ಬ್ಯಾಂಕ್ ಆಡಳಿತ ಮಂಡಳಿಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂದರು.

ರೈತರಿಗೆ ನೋಟೀಸ್ ನೀಡಿ ತೊಂದರೆ ನೀಡುವುದಕ್ಕೆ ಅವಕಾಶವಿಲ್ಲ. ರೈತರ ಹಿತವನ್ನು ಸರಕಾರ ಕಾಪಾಡಲಿದೆ ಎಂದು ಹೇಳಿದರು.  ಸಮ್ಮಿಶ್ರ ಸರ್ಕಾರ 9,448 ಕೋಟಿ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಕೆ-ಸೆಟ್, ಯು.ಜಿ.ಸಿ.-ನೆಟ್ ಪರೀಕ್ಷೆಗಳಿಗೆ ತರಬೇತಿ