Select Your Language

Notifications

webdunia
webdunia
webdunia
webdunia

ಹಣ ನೀಡಲ್ಲ ಎಂದ ತಾಯಿಗೆ ಕುಡುಕ ಮಗ ಮಾಡಿದ್ದೇನು ಗೊತ್ತಾ?

ಹಣ ನೀಡಲ್ಲ ಎಂದ ತಾಯಿಗೆ ಕುಡುಕ ಮಗ ಮಾಡಿದ್ದೇನು ಗೊತ್ತಾ?
ಚಿಕ್ಕಮಗಳೂರು , ಶುಕ್ರವಾರ, 18 ಜನವರಿ 2019 (06:22 IST)
ಚಿಕ್ಕಮಗಳೂರು : ಹಣ ನೀಡಲು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ  ವೃದ್ಧ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ರೋಡಿಗೆಸೆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.


ಮೀನಾಕ್ಷಿ ಮಗನಿಂದ ಕೊಲೆಯಾದ ದುರ್ದೈವಿ. ಗಣೇಶ್(48) ಹಣಕ್ಕಾಗಿ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗ. ಗಣೇಶ್ ತನ್ನ ತಾಯಿಯೊಂದಿಗೆ ವಾಸವಾಗಿದ್ದು, ಕೆಲವು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದನು. ಇದರಿಂದ ತಾಯಿಯೇ ದುಡಿದು ಸಂಸಾರವನ್ನು ನಡೆಸುತ್ತಿದ್ದರು.


ಆದರೆ ಇತ್ತೀಚೆಗೆ ತಾಯಿಗೆ ಸರ್ಕಾರದಿಂದ ಸುಮಾರು 1.5 ಸಾವಿರ ರೂ. ಪಿಂಚಣಿ ಹಣ ಬಂದಿತ್ತು. ಅದನ್ನು ತನಗೆ ಕೊಡುವಂತೆ ತಾಯಿಯ ಬಳಿ ಕೇಳಿದ್ದ. ಇದಕ್ಕೆ ತಾಯಿ ನಿರಾಕರಿಸಿದಾಗ ರಾತ್ರಿ ಮನೆಗೆ ಕುಡಿದು ಬಂದು ತಾಯಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಬಳಿಕ ತಾಯಿಯ ಶವವನ್ನು ರಸ್ತೆಮೇಲೆ ಹಾಕಿ ಹೋಗಿದ್ದಾನೆ.


ಇದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತನ ಕೊಲೆ ಮಾಡಿದ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್