Select Your Language

Notifications

webdunia
webdunia
webdunia
webdunia

ಸಿಟಿ ರವಿ ಕಾರು ಗುದ್ದಿ ಇಬ್ಬರ ಸಾವು: ಶಾಸಕರು ಎಲ್ಲೂ ಓಡಿ ಹೋಗಿಲ್ಲ ಎಂದ ಬಿಜೆಪಿ

ಸಿಟಿ ರವಿ ಕಾರು ಗುದ್ದಿ ಇಬ್ಬರ ಸಾವು: ಶಾಸಕರು ಎಲ್ಲೂ ಓಡಿ ಹೋಗಿಲ್ಲ ಎಂದ ಬಿಜೆಪಿ
ಚಿಕ್ಕಮಗಳೂರು , ಮಂಗಳವಾರ, 19 ಫೆಬ್ರವರಿ 2019 (10:22 IST)
ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿಟಿ ರವಿ ಚಲಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದ  ಯುವಕರ ಮೇಲೆ ಹರಿದು ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸ್ಪಷ್ಟನೆ ನೀಡಿದೆ.


ಕೊಲ್ಲೂರು ಪ್ರವಾಸಕ್ಕೆ ತೆರಳಿದ್ದ 12 ಮಂದಿ ಸ್ನೇಹಿತರ ತಂಡ ರಸ್ತೆ ಬದಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಶಾಸಕ ಸಿಟಿ ರವಿ ಕಾರು ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ಘಟನೆ ನಂತರ ಶಾಸಕ ರವಿ ಸಂತ್ರಸ್ತರಿಗೆ ನೆರವಿಗೆ ಬರದೇ ತರಾತುರಿಯಲ್ಲಿ ಸ್ಥಳದಿಂದ ನಿರ್ಗಮಿಸಿದದರು ಎಂದು ಆರೋಪಗಳು ಕೇಳಿಬಂದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಘಟಕ, ಶಾಸಕರು ಎಲ್ಲೂ ಓಡಿ ಹೋಗಿಲ್ಲ. ಸಾವನ್ನಪ್ಪಿದವರು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಸ್ಥಳಕ್ಕೆ ಪೊಲೀಸರು ಬಂದು, ಅವರು ಅನುಮತಿ ನೀಡಿದ ಬಳಿಕವಷ್ಟೇ ಸ್ಥಳದಿಂದ ನಿರ್ಗಮಿಸಿದ್ದರು. ಘಟನೆಯಲ್ಲಿ ಶಾಸಕರಿಗೂ ಎದೆಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ವೀಡನ್ ಮಹಿಳೆಯರು ಒಳ ಉಡುಪಿನ ಒಳಗೆ ಚಮಚ ಇಟ್ಟುಕೊಳ್ಳುತ್ತಿರುವುದು ಯಾಕೆ ಗೊತ್ತಾ?