Select Your Language

Notifications

webdunia
webdunia
webdunia
webdunia

ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಹಿರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ
ಚಿಕ್ಕೋಡಿ , ಬುಧವಾರ, 12 ಸೆಪ್ಟಂಬರ್ 2018 (15:19 IST)
ಹಿರಣ್ಯಕೇಶಿ ನದಿಯಲ್ಲಿ ಆಗಾಗ್ಗೆ ಮೊಸಳೆಯೊಂದು ಕಾಣಿಸಿಕೊಳ್ಳುತ್ತಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಸಂಕೇಶ್ವರ ನಗರದ ಹಿರಣ್ಯಕೇಶಿ ನದಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಹಿರಣ್ಯಕೇಶಿ  ನದಿಯಲ್ಲಿ ಆಗಾಗ ಮೊಸಳೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ  ಮೂಡಿಸಿದೆ. ಮೊಸಳೆ ಯಾವುದೇ ಭಯವಿಲ್ಲದೆ ನೀರಿನಲ್ಲಿ ತಿರುಗಾಡುತ್ತಿದ್ದು,  ಬಟ್ಟೆ ತೊಳೆಯುವವರು, ಸ್ನಾನ ಮಾಡುವವರು ಪರದಾಡಬೇಕಾದ ಪರಿಸ್ಥಿತಿ ಬಂದಿದೆ.

ಸಂಕೇಶ್ವರ್ ಪಟ್ಟಣದ ಜನರು ಸ್ವಲ್ಪ ಎಚ್ಚರದಿಂದಿರಬೇಕು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಕೃಷ್ಣ ದೇವಾಲಯಕ್ಕೆ ಕನ್ನ: ಹುಂಡಿ ಕಳ್ಳತನ