Select Your Language

Notifications

webdunia
webdunia
webdunia
webdunia

ಪ್ರಕಾಶ್ ರೈ ಲೆಕ್ಕಕ್ಕಿಲ್ಲ ಅಂತಂದ ಕಾಂಗ್ರೆಸ್ ಅಭ್ಯರ್ಥಿ

ಪ್ರಕಾಶ್ ರೈ ಲೆಕ್ಕಕ್ಕಿಲ್ಲ ಅಂತಂದ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು , ಸೋಮವಾರ, 25 ಮಾರ್ಚ್ 2019 (12:19 IST)
ಬೆಂಗಳೂರು ಸೆಂಟ್ರಲ್ ನಲ್ಲಿ  ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ರಿಜ್ವಾನ್ ಹರ್ಷದ್ ಈ ಹೇಳಿಕೆ ನೀಡಿದ್ದು, ಬೆಂಗಳೂರು ಕೇಂದ್ರದಲ್ಲಿ ಬಿಜೆಪಿ ಸಂಸದ ಪಿ. ಸಿ. ಮೋಹನ್  ಕೊಡುಗೆ ಏನೂ ಇಲ್ಲ ಎಂದು ದೂರಿದರು.

ನಮ್ಮದು ಬಿಜೆಪಿ ವಿರುದ್ಧ  ನೇರ ಸ್ಪರ್ಧೆ. ಕಳೆದ ಐದು ವರ್ಷ ನಾನು  ಕ್ಷೇತ್ರದಲ್ಲಿ ಕೆಲಸ ಕಾರ್ಯ  ಮಾಡಿದ್ದೇನೆ.
ಬೆಂಗಳೂರು ಸೆಂಟ್ರಲ್ ಗೆ  ಡೈನಾಮಿಕ್  ಎಂ.ಪಿ.  ಬೇಕು ಎಂದ ಅವರು, ಪ್ರಕಾಶ್ ರೈ ಸ್ಪರ್ಧೆ ನನ್ನ ಮೇಲೆ ಪರಿಣಾಮ  ಆಗಲ್ಲ ಎಂದೂ ತಿಳಿಸಿದರು.

ನನಗೆ  ನಿಶ್ಚಿತವಾಗಿಯೂ ಗೆಲ್ಲೋ ವಿಶ್ವಾಸ ಇದೆ. ಇಂದು ಒಂದು ಗಂಟೆಗೆ ನಾಮಪತ್ರ ಸಲ್ಲಿಕೆ ಮಾಡುವೆ. ರೋಷನ್ ಬೇಗ್ ಕೂಡಾ ಅಭ್ಯರ್ಥಿ ಆಕಾಂಕ್ಷಿಯಾಗಿದ್ದವರು. ರೋಷನ್ ಬೇಗ್ ಆಶಿರ್ವಾದ ಪಡೆದುಕೊಳ್ಳುತ್ತೇನೆ ಎಂದರು.

ರೋಷನ್ ಬೇಗ್  ಅವರ ವಿಶ್ವಾಸ ಪಡೆದುಕೊಂಡು ಚುನಾವಣಾ ಪ್ರಚಾರ ನಡೆಸುವೆ. ದೇವೇಗೌಡರು ಎಲ್ಲಿ ನಿಂತರೂ ಅವರ ಬೆಂಬಲ ನಮಗೆ ಇದ್ದೇ ಇರುತ್ತದೆ. ಹೆಚ್.ಡಿ. ದೇವೇಗೌಡರ  ಆಶೀರ್ವಾದ ಪಡೆದುಕೊಳ್ಳುತ್ತೇನೆ ಅಂತಾನೂ ರಿಜ್ವಾನ್ ಹರ್ಷದ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟ ಜೆಡಿಎಸ್. ಕಾರಣವೇನು ಗೊತ್ತಾ?