Select Your Language

Notifications

webdunia
webdunia
webdunia
webdunia

ಶಾಸಕರೊಂದಿಗೆ ಮುಕ್ತವಾಗಿ ಸಮಯ ಕಳೆದ ಸಿಎಂ ಕುಮಾರಸ್ವಾಮಿ

ಶಾಸಕರೊಂದಿಗೆ ಮುಕ್ತವಾಗಿ ಸಮಯ ಕಳೆದ ಸಿಎಂ ಕುಮಾರಸ್ವಾಮಿ
ದೇವನಹಳ್ಳಿ , ಶುಕ್ರವಾರ, 25 ಮೇ 2018 (14:07 IST)
ನಿನ್ನೆ ತಡರಾತ್ರಿ 12.30 ಕ್ಕೆ ರೆಸಾರ್ಟ್‌ಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕರೊಂದಿಗೆ ಮುಕ್ತವಾಗಿ ಮಾತನಾಡಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಜೆ.ಡಿ.ಎಸ್ ಶಾಸಕರಿಗೆ ಮತ್ತೆ ತಡರಾತ್ರಿ ಪಾಠ ಮಾಡಿದ ಸಿ.ಎಂ, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಲ್ಲದೇ ಶಾಸಕರಿಗೆ ವಿಸ್ವಾಸ ಮತ ಯಾಚನೆಯ ನಡವಳಿಯ ಬಗ್ಗೆ ಸಲಹೆ ಸೂಚನೆ ನೀಡಿದರು ಎನ್ನಲಾಗಿದೆ. 
 
ನಯವಾಗಿಯೇ ವಿಪ್ ಪ್ರತಿ ಹಸ್ತಾಂತರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಉದ್ಯಾನದಲ್ಲಿ ಸಂಚಾರ, ಎಲ್ಲರ ಜೊತೆ ವಾಕಿಂಗ್ ಮಾಡುತ್ತಾ ಮುಕ್ತವಾಗಿ ಸಮಯ ಕಳೆದು, ಕೆಲಸದ ಒತ್ತಡದ ನಡುವೆ ಉದ್ಯಾನದಲ್ಲಿ ರಿಲಾಕ್ಸ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬೆಟ್ಟದ ತಪ್ಪಲಿನ ಸುಂದರ ವನಸಿರಿಯ ಮಧ್ಯೆ ಜಾಲಿ ಮೂಡ್ ನಲ್ಲಿದ್ದ ಸಿ.ಎಂ, ಲೋಕಾಭಿರಾಮವಾಗಿ ಶಾಸಕರೊಂದಿಗೆ ರೆಸಾರ್ಟ್‌ನ ಲಾನ್ ನಲ್ಲಿ ಸುತ್ತಾಟ ನಡೆಸಿ ದಣಿದ ಜೀವಕ್ಕೆ ತಂಪು ನೀಡಿದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಮ್ ಫೀಟ್ ತೋ ಇಂಡಿಯಾ ಫಿಟ್.... ಚಾಲೆಂಜ್ ಸ್ವೀಕರಿಸಿದ ಸಂಸದ ಪ್ರತಾಪ್ ಸಿಂಹ