Select Your Language

Notifications

webdunia
webdunia
webdunia
webdunia

ತಮ್ಮ ಕಣ್ಣೀರಿಗೆ ಮೂಲಕಾರಣರಾರು ಎಂದು ಬಹಿರಂಗಪಡಿಸಿದ ಸಿಎಂ ಕುಮಾರಸ್ವಾಮಿ

ತಮ್ಮ ಕಣ್ಣೀರಿಗೆ ಮೂಲಕಾರಣರಾರು ಎಂದು ಬಹಿರಂಗಪಡಿಸಿದ ಸಿಎಂ ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 17 ಜುಲೈ 2018 (09:21 IST)
ಬೆಂಗಳೂರು: ಸಾರ್ವಜನಿಕವಾಗಿ ತಾವು ಕಣ್ಣೀರು ಹಾಕಿದ್ದು ದೊಡ್ಡ ಸುದ್ದಿಯಾಗುತ್ತಿದ್ದ ಸಿಎಂ ಕುಮಾರಸ್ವಾಮಿ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಅಷ್ಟಕ್ಕೂ ತಾನು ಸಾರ್ವಜನಿಕವಾಗಿ ಗದ್ಗತಿರಾಗಲು ನಿಜವಾದ ಕಾರಣ ಕಾಂಗ್ರೆಸ್ ನಾಯಕರು ಎಂದು ಬಿಜೆಪಿ ಟೀಕೆ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿಎಂ ರಾಜ್ಯ ನಾಯಕರಿಂದ ತಮಗೆ ತೊಂದರೆಯಾಗಿಲ್ಲ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರ ನಡೆಸಲು ಕಾಂಗ್ರೆಸ್ ನಿಂದ ನನಗೆ ತೊಂದರೆಯಾಗಿಲ್ಲ. ನನ್ನ ಕಣ್ಣೀರಿಗೆ ಅವರು ಕಾರಣರಲ್ಲ. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ವಿಚಾರದಲ್ಲಿ ಸಾರ್ವಜನಿಕರಿಂದ ಸೂಕ್ತ ಪ್ರೋತ್ಸಾಹ ದೊರೆಯದ ಕಾರಣ ಮನಸ್ಸಿಗೆ ಬೇಸರವಾಗಿದೆ. ಹೀಗಾಗಿಯೇ ಕಣ್ಣೀರು ಹಾಕಿದೆ. ಆದರೆ ಕಾಂಗ್ರೆಸ್ ನಾಯಕರಿಂದ ಕಣ್ಣೀರು ಹಾಕಿದೆ ಎಂದು ತಿರುಚಬೇಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಗೆ ಕೊಕ್?