Select Your Language

Notifications

webdunia
webdunia
webdunia
webdunia

ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು- ಮಂಡ್ಯದ ಜನತೆಯಿಂದ ಆಕ್ರೋಶ

ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು- ಮಂಡ್ಯದ ಜನತೆಯಿಂದ ಆಕ್ರೋಶ
ಮಂಡ್ಯ , ಭಾನುವಾರ, 25 ನವೆಂಬರ್ 2018 (09:08 IST)
ಮಂಡ್ಯ : ಹಿರಿಯ ನಟ ಅಂಬರೀಶ್ ನಿಧನದ ಹಿನ್ನಲೆ ಅಂಬರೀಶ್ ಅವರ ಮೃತದೇಹವನ್ನು ಮಂಡ್ಯಕ್ಕೆ ತರಲೇಬೇಕು ಎಂದು ಮಂಡ್ಯದ ಜನತೆ ಪಟ್ಟು ಹಿಡಿದಿದ್ದಾರೆ.


ನಟ ಅಂಬರೀಶ್ ಅವರು ಶನಿವಾರ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯ ಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸಬೇಕೆಂದು ಗಣ್ಯರು ತೀರ್ಮಾನಿಸಿದ್ದಾರೆ. ಆದರೆ ಅಂಬರೀಶಣ್ಣ ಹುಟ್ಟಿ ಬೆಳೆದಿದ್ದು, ಮಂಡ್ಯದಲ್ಲಿ ಹಾಗಾಗಿ ಮಂಡ್ಯಕ್ಕೆ ಮೃತದೇಹ ತರಲೇಬೇಕು ಎಂದು ಮಂಡ್ಯದ ಜನತೆ ಪಟ್ಟು ಹಿಡಿದಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಈ ವೇಳೆ ಅಭಿಮಾನಿಯೊಬ್ಬ ಅಂಬಿ ಪಾರ್ಥಿವ ಶರೀರವನ್ನು ನೋಡಲು ಮೈಸೂರನಿಂದ ಮಂಡ್ಯಕ್ಕೆ ಆಗಮಿಸಿದ್ದಾನೆ. ನಾನು ಸತ್ತರೂ ಚಿಂತೆಯಿಲ್ಲ. ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ಇಲ್ಲಾಂದ್ರೆ ನಾನು ಚಾಕು ಹಾಕಿಕೊಂಡು ಸಾಯುತ್ತೇನೆಯೇ ಹೊರತು ಅಂಬಿಯ ಅಂತಿಮ ದರ್ಶನ ಪಡೆಯದೇ ಇಲ್ಲಿಂದ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ಗಣ್ಯರು