Select Your Language

Notifications

webdunia
webdunia
webdunia
webdunia

ಮಗಳಿಗೆ ವಿಷ ಕುಡಿಸಿ ಕೊಲೆ ಮಾಡಿದ ತಂದೆ. ಕಾರಣವೇನು ಗೊತ್ತಾ?

ಮಗಳಿಗೆ  ವಿಷ ಕುಡಿಸಿ ಕೊಲೆ ಮಾಡಿದ ತಂದೆ. ಕಾರಣವೇನು ಗೊತ್ತಾ?
ಕಾರವಾರ , ಶುಕ್ರವಾರ, 11 ಜನವರಿ 2019 (12:41 IST)
ಕಾರವಾರ : ಮಗಳ  ಚಿಕಿತ್ಸೆಗೆ ಹಣ ಖರ್ಚು ಮಾಡಲಾಗದೇ ತಂದೆ ಮಗಳಿಗೆ  ವಿಷ ಕುಡಿಸಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕುಂಬ್ರಿಯಲ್ಲಿ ನಡೆದಿದೆ.


ನಯನಾ(11) ತಂದೆಯಿಂದ ಕೊಲೆಯಾದ ಮಗಳು. ನಾಗರಾಜ್ ಪೂಜಾರಿ(44) ಕೊಲೆ ಮಾಡಿದ ತಂದೆ. ಈತ ಮೂರು ಜನ ಹೆಣ್ಣು ಮಕ್ಕಳನ್ನು ಹೊಂದಿದ್ದು, ನಯನಾ ಕೊನೆಯ ಮಗಳಾಗಿದ್ದು, ಹೃದಯ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಹಿಂದೆ ನಾಗರಾಜ್ ದಾನಿಗಳ ಸಹಾಯದಿಂದ ನಯನಾಗೆ ಬೈಪಾಸ್ ಸರ್ಜರಿ ಮಾಡಿಸಿದ್ದನು. ಆದರೆ ಹಣದ ಸಮಸ್ಯೆಯಿಂದ ನೊಂದ ಆತ ಕುಡಿಯುವ ಚಟ ಬೆಳೆಸಿಕೊಂಡಿದ್ದನು. ಇದರಿಂದ ಆತನ ಪತ್ನಿ ಆತನಿಂದ ದೂರವಾಗಿದ್ದಳು.


ಬುಧವಾರ ನಯನಾ ತಾಯಿ ಬೇಕೆಂದು ಹಠ ಹಿಡಿದಿದ್ದಳು. ಇದರಿಂದ ನಾಗರಾಜ್ ಇನ್ನಷ್ಟು ಕೋಪಗೊಂಡು ಮಗಳಿಗೆ ಕ್ರಿಮಿನಾಶಕ ತಿನ್ನಿಸಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ನ ಪರಿಷತ್ ನಾಮನಿರ್ದೇಶನಕ್ಕೆ ಹೆಸರು ಫೈನಲ್ ಮಾಡಿರುವ ರಾಜ್ಯ ಸರ್ಕಾರ