Webdunia - Bharat's app for daily news and videos

Install App

ಒಬ್ಬರ ಅಕೌಂಟ್ಗೆ 200 ಶೌಚಾಲಯಗಳ ಬಿಲ್: ಫಲಾನುಭವಿಗಳ ಅಕೌಂಟಗೆ ಇಲ್ಲ ಹಣ?.

Webdunia
ಗುರುವಾರ, 12 ಜುಲೈ 2018 (16:32 IST)
ಒಂದೆಡೆ ಪ್ರದಾನಿ ಸ್ವಚ್ಚ ಬಾರತ ಎಂದು ದೇಶವನ್ನು ಶುಚಿಗೊಳಿಸಲು ಹೊರಟರೆ ರಾಜ್ಯದ ಅದಿಕಾರಿಗಳು ಸ್ವಚ್ಚ ಬಾರತ ಯೋಜನೆಯಡಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ.

ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ.  2017-18 ರ ಸ್ವಚ್ಚ ಭಾರತ ಮಿಶನ್ ಯೋಜನೆಯಡಿಯಲ್ಲಿ 200 ಕ್ಕೂ ಹೆಚ್ಚು ಶೌಚಾಲಯಗಳ ಬಿಲ್ ನ್ನ ಆಯಾ ಫಲಾನುಭವಿಗಳ ಅಕೌಂಟ್ ಗೆ ಜಮಾ ಆಗಬೇಕಿತ್ತು, ಆದರೆ ಆ ಹಣ ಕೇವಲ ಒಬ್ಬರ ಗುತ್ತಿಗೆದಾರನ ಅಕೌಂಟ್ ಗೆ ಸಂದಾಯ ಮಾಡಿದ್ದಾರೆ. ಆದರೆ ಶೌಚಾಲಯಗಳು ಎಲ್ಲವೂ ಕಳಪೆ ಮಟ್ಟದ ಶೌಚಾಲಯಗಳಿವೆ. ಇನ್ನು ಪಂಚಾಯತ್ ಅಭಿವೃದ್ದಿ ಇಲಾಖೆ ಅದಿಕಾರಿಗಳು ಈ ಗೋಲ್ಮಾಲ್ ಮಾಡಿದ್ದಾರೆ.  ಈ ಕುರಿತು ಅದಿಕಾರಿಗಳನ್ನ ಕೇಳಿದರೆ ಪೋನ್ ಕೂಡಾ ರಿಸಿವ್ ಮಾಡಲ್ಲ. ಆದರೆ ಈ ಅವ್ಯವಹಾರವನ್ನ ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ನಾಯಿಕಮನಿ ಅವರು ಮಾಹಿತಿ ಹಕ್ಕಿನಲ್ಲಿ ಬಯಲಿಗೆ ಎಳದಿದ್ದಾರೆ.

ಈ ಕುರಿತು ಫಲಾನುಭವಿಗಳನ್ನ ಕೇಳಿದರೆ ನಮ್ಮ ಅಕೌಂಟಗೆ ಹಣ ಬಂದಿಲ್ಲ. ತಯಾರಾಗಿದ್ದ ಶೌಚಾಲಯವನ್ನು ತಂದಿಟ್ಟಿದ್ದಾರೆ. ಆದರೆ ಈ ಕುರಿತು  ಸಂಭಂದಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿಯನ್ನ ನಿಡುತ್ತಿಲ್ಲ. ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಕಾರ್ಯದರ್ಶಿ ಅವರು ಇಂತಹ ಪ್ರಕರಣಗಳಲ್ಲಿ ತಪ್ಪುಮಾಡಿದವರ ವಿರುದ್ದ ಕ್ರಮ ಜರುಗಿಸಬೇಕು ಎಂದು  ರಾಜ್ಯದ ಎಲ್ಲ ಜಿ ಪಂ ಕಾರ್ಯನಿರ್ವಾಹಕ ಅದಿಕಾರಿಗಳಿಗೆ ಆದೆಶ ಮಾಡಿದ್ದರು. ಇನ್ನುವರೆಗೂ ಯಾವುದೆ ಕ್ರಮವನ್ನು ಜರುಗಿಸದೆ ಅದಿಕಾರಿಗಳು ಸುಮ್ಮನಿರುವದು ಅನುಮಾನಕ್ಕೆ ಎಡೆಮಾಡಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments