Select Your Language

Notifications

webdunia
webdunia
webdunia
webdunia

ಯಶ್ ಸಿನಿಮಾಗಳೂ.. ಡೈಲಾಗ್ ಗಳೂ..

ಯಶ್ ಸಿನಿಮಾಗಳೂ.. ಡೈಲಾಗ್ ಗಳೂ..
Bangalore , ಶುಕ್ರವಾರ, 28 ಅಕ್ಟೋಬರ್ 2016 (11:16 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಲ್ಲಿ ಭರ್ಜರಿ ಡೈಲಾಗ್ ಗಳಿರುತ್ತವೆ. ಆದರೆ ಅವರ ಡೈಲಾಗ್ ಗಳು ಹೆಚ್ಚಾಗಿ ಯಾರಿಗೋ ನಾಟುವಂತೆ , ಪರೋಕ್ಷವಾಗಿ ಟಾಂಗ್ ಕೊಡುವಂತೆ ಇರುತ್ತದೆ ಎನ್ನುವ ಆಕ್ಷೇಪಗಳೂ ಇವೆ.

ಉದಾಹರಣೆಗೆ, ರಾಮಾಚಾರಿ ಚಿತ್ರ. ಆಗಷ್ಟೇ ಯಶ್ ಚಿತ್ರರಂಗದಲ್ಲಿ ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಆ ಚಿತ್ರದಲ್ಲಿ ವಿಲನ್ ಗೆ ಯಶ್ ನಾ ಬಂದ್ಮೇಲೆ ನಂದೇ ಹವಾ..” ಎನ್ನುವ ಡೈಲಾಗ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದು ಯಶ್ ಬೇರೆ ನಾಯಕರಿಗೆ ಕೊಟ್ಟ ಟಾಂಗ್ ಎನ್ನುವ ಮಾತುಗಳೂ ಕೇಳಿಬಂದಿತ್ತು.

ಅದಾದ ಮೇಲೆ ಈಗ ಬಂದಿರುವ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ಇಂತಹದ್ದೇ ಹಲವು ಡೈಲಾಗ್ ಗಳಿವೆ. ಹೀರೋ ವಿಲನ್ ಜತೆ ಹೊಡೆದಾಡುವ ಮೊದಲು ಹೇಳುವ ಹಲವು ಡೈಲಾಗ್ ಗಳು ಉದ್ದೇಶ ಪೂರ್ವಕವಾಗಿ ಕನ್ನಡದ ಇತರ ನಟರಿಗೆ ಟಾಂಗ್ ಕೊಟ್ಟಿದ್ದು ಎನ್ನಲಾಗುತ್ತಿದೆ.

ಅದರಲ್ಲೂ ವಿಶೇಷವಾಗಿ ಟ್ರೈಲರ್ ನಲ್ಲಿ ಯಶ್ ಹೇಳುವ “ವಿಕೆಟ್, ಬ್ಯಾಟ್..” ಡೈಲಾಗ್ ಹಾಗೂ “ಹುಲಿ ಬೋನಿಗೆ ನುಗ್ಗುತ್ತಿರುವುದು ರಾಜಾ ಹುಲಿ” ಎಂದು ಮಿಸೆ ತಿರುವಿಕೊಂಡು ಹೇಳುವ ಡೈಲಾಗ್ ಗೆ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಕೆಣಕಿದೆ ಎನ್ನಲಾಗುತ್ತಿದೆ.

ಅದೇ ಕಾರಣಕ್ಕೆ ಇವರಿಬ್ಬರೂ ಟ್ವಿಟರ್ ನಲ್ಲಿ ಪ್ರಶ್ನೆ ಮತ್ತು ಉತ್ತರ ರೌಂಡ್ ಶುರು ಮಾಡಿಕೊಂಡಿರುವುದು ಎಂಬ ಗುಸು ಗುಸು ಕೇಳಿ ಬರುತ್ತಿದೆ. ಮೊದಲ ಪ್ರಶ್ನೆಯಲ್ಲೇ ಉಪೇಂದ್ರ ಬ್ಯಾಟ್, ವಿಕೆಟ್, ಬಾಲ್ ಎಂದೆಲ್ಲಾ ಕೇಳಿದ್ದು ನೋಡಿದರೆ ಇದೆಲ್ಲಾ ಯಶ್ ಡೈಲಾಗ್ ನ ಇಫೆಕ್ಟ್ ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ. ಆದರೆ ಯಶಸ್ಸಿನ ಉತ್ತುಂಗದಲ್ಲಿದ್ದೇನೆಂದು ಬೇರೆ ನಟರಿಗೆ ಯಶ್ ಈ ರೀತಿ ಡೈಲಾಗ್ ಗಳಲ್ಲೇ ಚುಚ್ಚುವುದು ಸರಿಯಲ್ಲ ಎಂದೂ ಕೆಲವು ಹೇಳುತ್ತಿದ್ದಾರೆ.

ಅದೇನೇ ಇದ್ದರೂ ಸುದೀಪ್ ಮತ್ತು ಉಪೇಂದ್ರ ನಡೆಸಿದ ಟ್ವಿಟರ್ ಪ್ರಶ್ನಾವಳಿ ಅವರ ಮುಕುಂದ ಮುರಾರಿ ಚಿತ್ರಕ್ಕೆ ಸಾಕಷ್ಟು ಪ್ರಚಾರ ಕೊಟ್ಟಿದ್ದಂತೂ ನಿಜ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಗೆ ಪತ್ನಿಯ ಶುಭಹಾರೈಕೆ