Select Your Language

Notifications

webdunia
webdunia
webdunia
webdunia

ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!

ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!
Hyderabad , ಬುಧವಾರ, 8 ಮಾರ್ಚ್ 2017 (09:51 IST)
ಹೈದರಾಬಾದ್:  ‘ಬಾಹುಬಲಿ’ ಭಾಗ 1 ಸಿನಿಮಾ ಮುಗಿದ ನಂತರ ಎಲ್ಲರ ಪ್ರಶ್ನೆ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಎಂದಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಆ ಪ್ರಶ್ನೆಗೆ ಸ್ವತಃ ಕಟ್ಟಪ್ಪ ಉತ್ತರಿಸಿದ್ದಾರೆ ನೋಡಿ.

 
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಗೂ ಎಲ್ಲಿ ಹೋದರೂ ಇದೇ ಪ್ರಶ್ನೆ ಎದುರಾಗುತ್ತಿತ್ತಂತೆ. ಅದಕ್ಕೇ ಅವರು ಉತ್ತರ ಕೊಟ್ಟಿದ್ದಾರೆ. ಆದರೆ ಭಾರೀ ಖುಷಿಯಾಗಬೇಕಿಲ್ಲ. ಯಾಕೆಂದರೆ ಅವರು “ನನ್ನ ನಿರ್ದೇಶಕರು ಬಾಹುಬಲಿಯನ್ನು ಕೊಲ್ಲಲು ಹೇಳಿದ್ದರು. ಅದಕ್ಕೇ ಕೊಂದೆ” ಎಂದಿದ್ದಾರೆ.

ಹಿಂದೊಮ್ಮೆ ನಿರ್ದೇಶಕ ರಾಜಮೌಳಿ ಕೂಡಾ ಇದೇ ರೀತಿಯ ಉತ್ತರ ಹೇಳಿದ್ದರು. ಇದೀಗ ಕಟ್ಟಪ್ಪ ಕೂಡಾ ಹಾಗೇ ಹೇಳಿದ್ದಾರೆ. ನಾನು ನನ್ನ ಮನೆಯಲ್ಲೂ ಈ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ. ಜನ ಈ ಬಗ್ಗೆ ಪ್ರಶ್ನೆ ಕೇಳಿದರೆ ನನ್ನ ಪಾತ್ರ ಇಷ್ಟು ಪಾಪ್ಯುಲರ್ ಆಗಿದೆಯಲ್ಲಾ ಎಂದು ಖುಷಿಪಡುತ್ತೇನೆ. ನಿಜವಾದ ಕಾರಣ ಬಾಹುಬಲಿ ಎರಡನೇ ಭಾಗದಲ್ಲಿ ಥಿಯೇಟರ್ ನಲ್ಲೇ ಹೋಗಿ ನೋಡಿ  ಎಂದು ಸತ್ಯರಾಜ್ ಡೈಲಾಗ್ ಹೊಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು