Select Your Language

Notifications

webdunia
webdunia
webdunia
webdunia

ತಮ್ಮ ವಿರುದ್ಧ ದಾಖಲಾದ ದೂರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು?

ತಮ್ಮ ವಿರುದ್ಧ ದಾಖಲಾದ ದೂರಿಗೆ ರಕ್ಷಿತ್ ಶೆಟ್ಟಿ ಕೊಟ್ಟ ಸ್ಪಷ್ಟನೆ ಏನು?
ಬೆಂಗಳೂರು , ಗುರುವಾರ, 9 ಆಗಸ್ಟ್ 2018 (16:16 IST)
ಬೆಂಗಳೂರು: ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ  ನಟ ರಕ್ಷಿತ್ ಶೆಟ್ಟಿ ವಿರುದ್ಧ ಧನಂಜಯ್ ಪದ್ಮನಾಭಾಚಾರ್ ಎಂಬುವವರು ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ.


ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದರೂ ಕಾರ್ ಪಾರ್ಕ್ ಮಾಡಿದ್ದರಿಂದ ರಕ್ಷಿತ್ ವಿರುದ್ಧ ಜೆಪಿ ನಗರದ ನಿವಾಸಿಗಳು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು.  


‘ಆ ಕಾರ್ ನನ್ನದಲ್ಲ. ನಾನು ಕಾರನ್ನು ನನ್ನ ಗೆಳೆಯನಿಗೆ ಮಾರಾಟ ಮಾಡಿ ಒಂದು ವರ್ಷವಾಗಿದೆ. ಜೆಪಿ ನಗರದಲ್ಲಿ ಒಂದು ಸ್ಟುಡಿಯೋ ಇದೆ. ಅದರ ಪಕ್ಕದಲ್ಲಿಯೇ ಪಾರ್ಕ್ ಮಾಡಿದ್ದಾರೆ. ಆದರೆ ನಾನು ಅಲ್ಲಿಗೆ ಹೋಗಿಲ್ಲ. ಪಾರ್ಕಿಂಗ್ ಬೋರ್ಡ್ ನ್ನು ಸರ್ಕಾರವರಾಗಲಿ ಅಥವಾ ಪೊಲೀಸರು ಹಾಕಿಲ್ಲ. ಅಲ್ಲಿನ ನಿವಾಸಿಗಳೇ ಹಾಕಿದ್ದಾರೆ. ಅಲ್ಲಿ ಕಾರ್ ಪಾರ್ಕಿಂಗ್ ಮಾಡುವುದು ತಪ್ಪು. ಆದರೆ ನಾನು ಕಾರ್ ಪಾರ್ಕ್ ಮಾಡಿಲ್ಲ. ತಪ್ಪು ನನ್ನದಲ್ಲ ಎಂದು ರಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಪ್ರಿಯಾಂಕ ಚೋಪ್ರಾ ಮೇಲೆ ಸಿಟ್ಟಾಗಿ ಹೇಳಿದ್ದೇನು ಗೊತ್ತೇ?