ಪುನೀತ್ ರಾಜ್ ಕುಮಾರ್ ಅವರ ನಟನೆಯ ಧೀರ ರಣ ವಿಕ್ರಮ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಈ ಸಿನಿಮಾವನ್ನು ನಿರ್ದೇಶಕ ಪವನ್ ವಡೆಯರ್ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಸದಾ ಅನೇಕ ಸುದ್ದಿಗಳು ಗಮನ ಸೆಳೆಯುವಂತೆ ಇದೆ. ಆರಂಭದಲ್ಲಿ ಪುನೀತ್ ಈ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸಂಗತಿ ಸುದ್ದಿ ಆಗಿತ್ತು,
ಆ ಬಳಿಕ ಹೀರೋಯಿನ್ ಆಯ್ಕೆ.. ಅದಾದ ಬಳಿಕ ಹಂಪಿಯಲ್ಲಿ ನಡೆಸಿದ ಶೂಟಿಂಗ್ ವಿಷಯಕ್ಕೆ ಸಂಬಂಧಪಟ್ಟ ಸುದ್ದಿ. ಹೀಗೆ ಏನಾದರೊಂದು ಸದ್ದು ಮಾಡುತ್ತಲೇ ಇದೆ. ಈ ಚಿತ್ರವು ಸದಾ ಸುದ್ದಿಗಳ ಆಗರವಾಗಿ ಬಿಡುಗಡೆಗಿಂತ ಮುಂಚೆಯೇ ಎಲ್ಲರ ಗಮನ ಸೆಳೆಯುತ್ತಿದೆ ಇಂತಹ ಕಾರಣಗಳಿಂದ.
ಈಗ ಮತ್ತೊಂದು ವಿವಾದಿತ ಸುದ್ದಿ ಎಲ್ಲರ ಗಮನ ಸೆಳೆಯುತ್ತಿದೆ ಎಂದೇ ಹೇಳ ಬಹುದು. ಈ ಚಿತ್ರದಲ್ಲಿ ಪುನೀತ್ ಸಾಧುವಿನಂತೆ ವೇಷಧಾರಣೆ ಮಾಡಿದ್ದಾರೆ ಎಂದು ತಿಳಿಸುವಂತಹ ಪೋಸ್ಟರ್ ರಾರಾಜಿಸುತ್ತಿದೆ.ಇದು ಈಗ ಎಲ್ಲರ ಗಮನ ಸೆಳೆದಿದೆ. ಆದರೆ ನಿರ್ದೇಶಕ ಪವನ್ ವಡೆಯರ್ ಇದೊಂದು ಸುಳ್ಳು ಛಾಯಾಚಿತ್ರ. ಈ ರೀತಿಯ ಯಾವುದೇ ರೀತಿಯ ಅಂಶಗಳು ಸಹ ಸಿನಿಮಾದಲ್ಲಿ ಇರುವುದಿಲ್ಲ ಎನ್ನುವ ಸಂಗತಿ ಹೇಳಿದ್ದಾರೆ.
ಒಟ್ಟಾರೆ ಚಿತ್ರದಲ್ಲಿ ಯಾವುದೇ ರೀತಿಯ ವಿವಾದಿತ ಸಂಗತಿಗಳು ಇಲ್ಲ ಎನ್ನುವ ಮಾತನ್ನು ಚಿತ್ರತಂಡ ಹೇಳಿದ್ದಾರೆ. ಸದ್ಯಕ್ಕಂತೂ ಧೀರನ ಮೇಲೆ ಜನರ ಗಮನ ಬಿದ್ದಿದೆ.