Select Your Language

Notifications

webdunia
webdunia
webdunia
webdunia

ನರ್ತಕಿಗೆ ಬಂದ ರಾಧಿಕಾ: ಅಭಿಮಾನಿಗಳಲ್ಲಿ ಪುಳಕ

ನರ್ತಕಿಗೆ ಬಂದ ರಾಧಿಕಾ: ಅಭಿಮಾನಿಗಳಲ್ಲಿ ಪುಳಕ
, ಸೋಮವಾರ, 9 ಮಾರ್ಚ್ 2015 (10:44 IST)
ನಿರ್ದೇಶಕ ಗುರುದೇಶಪಾಂಡೆ ತಮ್ಮ ನಿರ್ದೇಶನದ ಇತ್ತೀಚಿನ ಚಿತ್ರ ರುದ್ರ ತಾಂಡವ  ಚಿತ್ರದ ಯಶಸ್ವಿ ಪ್ರದರ್ಶನಕ್ಕಾಗಿ ಹೊಸ ಹೊಸ ಐಡಿಯಾಗಳನ್ನು ಮಾಡ್ಯಾರೆ! ಚಿರಂಜೀವಿ ಸರ್ಜಾ ಹಾಗೂ ರಾಧಿಕ ಕುಮಾರ ಸ್ವಾಮಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ  ಬಿಡುಗಡೆಯಾಗಿ ಈಗಾಗಲೇ ಎಂಟರ ಮೇಲೆ ಒಂದಷ್ಟು ದಿನಗಳು ಪೂರ್ಣವಾಗಿದೆ. ತಮ್ಮ ಚಿತ್ರದ ಯಶಸ್ಸಿಗಾಗಿ ಬಗೆ ಬಗೆಯ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ ಗುರು.
ಕಳೆದ ಶುಕ್ರವಾರ ಮಧ್ಯಾನ್ಹ ನಟಿ ರಾಧಿಕ ಕುಮಾರ್ ಸ್ವಾಮಿ ಅವರು ಸಿನಿಮಾದ ಟಿಕೆಟ್ಗಳನ್ನು ಮಾರಾಟ ಮಾಡಿದರು. ಆಕೆ ಈ ಮುಖಾಂತರ ತನ್ನ ಹೊಸ ಚಿತ್ರದ ಪ್ರಮೋಟ್  ಮಾಡಿದ್ದಾರೆ. ಆಕೆ ಚಿತ್ರವನ್ನು ಪ್ರಮೋಟ್ ಮಾಡಿದ್ದಲ್ಲದೆ, ಆ ಚಿತ್ರ ವೀಕ್ಷರಿಗೋ ಆಕರ್ಷಣೆ ಆಗಿದ್ದು ಸುಳ್ಳಲ್ಲ. ಗುರು ದೇಶಪಾಂಡೆ ರಾಧಿಕ ಚಿತ್ರಕ್ಕೆ ಟಿಕೆಟ್ ನೀಡುವ ಬಗ್ಗೆ ಈ ಮೊದಲೇ ತಿಳಿದ್ದರು. ಅ ಕಾರಣದಿಂದ ಆಕೆಯ ಅಭಿಮಾನಿಗಳು ರಾಧಿಕಾರನ್ನು ನೋಡಲು ನೂಕು ನುಗ್ಗಲಾದರು. ಒಂದು ಬಾರಿ ಆ ಚಿತ್ರ ನೋಡಿದವರು ಸಹ ಮತ್ತೊಂದು ಬಾರಿ ಆಕೆಯನ್ನು ನೋಡಲೆಂದು ಥಿಯೇಟರ್‌ಗೆ ಬಂದರು. ಈ ಟಿಕೆಟ್ ಮಾರಾಟ ಕಾರ್ಯಕ್ರಮ ನಡೆದದ್ದು ಬೆಂಗಳೂರು ನಗರದ  ನರ್ತಕಿ ಥಿಯೇಟರ್ ನಲ್ಲಿ. 
 
ರಾಧಿಕ ಆಗಮನ ದಿಂದ ಭರ್ಜರಿ ಗಳಿಕೆ ಆಗಿದ್ದು ಸುಳ್ಳಲ್ಲ. ಆ ಷೋ ಹೌಸ್ ಫುಲ್ ಆಗಿದ್ದು ಸತ್ಯ. ತನ್ನ ಭೇಟಿಯಿಂದ ಪ್ರೇಕ್ಷಕರು ಈ ಪರಿ ಪುಳಕಿತ ರಾಗಿದ್ದನ್ನು ಕಂಡ ರಾಧಿಕೆ ಈಗ ಉತ್ತರ ಕರ್ನಾಟಕದತ್ತಲು ತಮ್ಮ ಚಿತ್ತ ನೆಟ್ಟು ಶನಿವಾರ  ತುಮಕೂರಿಗೆ ಹೋಗಿ ಆ ಬಳಿಕ ಆಕೆ  ಹಿರಿಯೂರ್, ಚಿತ್ರದುರ್ಗ, ದಾವಣಗೆರೆ, ಹರಿಹರ, ಹುಬ್ಬಳ್ಳಿ, ಧಾರವಾಡ, ಗದಗ್, ರಾಣಿ ಬೆನ್ನೂರ್, ಮುಂತಾದ ಜಾಗಗಳಿಗೆ ಭೇಟಿ ನೀಡಿ  ಜನರನ್ನು ಖುಷಿ ಪಡೆಸಿದ್ದಾರೆ.  
 

Share this Story:

Follow Webdunia kannada