ಯೋಗರಾಜ್ ಭಟ್ ನಿರ್ದೇಶನ, ಈ ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ತಯಾರಾದ ಚಿತ್ರ ಮುಂಗಾರು ಮಳೆ. ಮಳೆಯು ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ ಮತ್ತು ಕೃಷ್ಣಪ್ಪ ಅವರಿಗೆ ಜೀವದಾನ ಮಾಡಿತು. ಒಂದು ವರ್ಷಗಳ ಕಾಲ ಈ ಚಿತ್ರ ನಿರಂತರವಾಗಿ ಥಿಯೇಟರ್ ನಲ್ಲಿ ಇತ್ತು.
ಆದಾದ ಬಳಿಕ ಬಂದ ಗಣೇಶ್ ಚಿತ್ರಗಳಲಿ ಒಂದಷ್ಟು ಮಾತ್ರ ಜೀವ ಕಂಡಿತು, ಉಳಿದೆಲ್ಲವೂ ಮಕಾಡೆ ಮಲಗಿದ್ದು ಹಳೆ ಸಂಗತಿ. ಆದರೆ ಆ ಮುಂಗಾರು ಮಳೆಯ ಯಶಸ್ಸು ಇನ್ನು ನಿರ್ಮಾಪಕ ಮತ್ತು ಗಣೇಶ್ ಮನದಲ್ಲಿ ಸಿಹಿ ಅಲೆ ನೀಡಿದ್ದರಿಂದ ಆ ಚಿತ್ರದ ಭಾಗ 2 ಎರಡು ನಿರ್ಮಾಣದ ಬಗ್ಗೆ ಗಮನ ನೀಡಿದ್ದಾರೆ.
ಅಂದರೆ ಮುಂಗಾರು ಮಳೆ 2 ಚಿತ್ರ ಈಗ ಸಿದ್ಧತೆ ನಡೆಸಿದೆ ಜನರ ಮುಂದೆ ಬರಲು. ಅದರ ಸ್ಕ್ರಿಪ್ಟ್ ಗೆ ನಿನ್ನೆ, ಎಂದರೆ ಸೋಮವಾರ ಪೂಜೆ ಮಾಡಲಾಯಿತು. ಭಾಗ 2 ನ್ನು ಶಶಾಂಕ್ ಅವರು ನಿರ್ದೇಶಿಸುತ್ತಿದ್ದಾರೆ.ಈಕೆ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಗಂಗಾಧರ್ ಅವರು ಅವರು ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ. ಗಣೇಶ್ ಮತ್ತು ಶಶಾಂಕ್ ಅವರು ಬ್ಯುಸಿ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರಂತೆ. ಅಂತೂ ಈ ಮುಂಗಾರು ಮಳೆ ಮತ್ತೆ ಸುರಿಯೋಕೆ ಸಿದ್ಧವಾಗಿದೆ..