Select Your Language

Notifications

webdunia
webdunia
webdunia
webdunia

ಜನತೆಯ ಬಳಿ ಕ್ಷಮೆ ಯಾಚಿಸಿದ ನಿರ್ದೇಶಕ ಓಂ ಪ್ರಕಾಶ್ ರಾವ್

ಜನತೆಯ ಬಳಿ ಕ್ಷಮೆ ಯಾಚಿಸಿದ ನಿರ್ದೇಶಕ ಓಂ ಪ್ರಕಾಶ್ ರಾವ್
ಬೆಂಗಳೂರು , ಶನಿವಾರ, 30 ಆಗಸ್ಟ್ 2014 (09:12 IST)
ನಟನೆ ಮಾಡ ಬೇಕಾ ಹಾಗಾದರೆ ಹಾಸಿಗೆ ಹಂಚಿಕೊಳ್ಳಿ ಅನ್ನುವ ಪದ್ಧತಿಯ ಬಗ್ಗೆ ಕೇಳಿರುವ ಜನತೆಗೆ ಇತ್ತೀಚಿಗೆ ಅದರ ಕರಾಳ ರೂಪದ ವಾಸ್ತವ ದರ್ಶನ ಆಯ್ತು.  ಸ್ಯಾಂಡಲ್ ವುಡ್ ನ ಪ್ರಸಿದ್ಧ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ರೀತಿಯ ಬಾನಗಡಿ ಮಾಡಿ  ಬೆತ್ತಲೆಆಗಿ ಬಿಟ್ರು ಇತ್ತೀಚಿನ ದಿನಗಳಲ್ಲಿ. ಇದಕ್ಕೆ ಸಂಬಂಧ   ಪಟ್ಟಂತೆ ಶ್ರೀರಂಗ  ಪಟ್ಟಣದಲ್ಲಿ  ಜನರಿಂದ ವದೆ ಬಿದ್ದ ಬಳಿಕ ಸಾಕಷ್ಟು ಬುದ್ಧಿ ಕಲಿತು ಕೊಂಡ ನಿರ್ದೇಶಕ ಕ್ಷಮೆ  ಯಾಚಿಸಿದ್ದಾರೆ ಜನರ ಮುಂದೆ.. ತಪ್ಪು ಮಾಡಿ ಬಿಟ್ಟೆ, ಮಣ್ಣು   ತಿಂದು ಬಿಟ್ಟೆ ಬಿಟ್ ಬಿಡ್ರಪ್ಪೋ ನನ್ನನ್ನು ಎಂದು ಯಾವುದೇ ರೀತಿಯ ಬೇಸರ, ಕಿರಿಕಿರಿ  ಅಪಮಾನ ಇಲ್ಲದೆ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಟೀವಿ ಚಾನೆಲ್ ಗೆ ಬಂದು. ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ಸೆಕ್ಸ್ ಸ್ಕ್ಯಾಂಡಲ್ ದೊಡ್ಡ ಸುದ್ದಿ ಆಗಿದೆ. 
 
 ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡ ಬಯಸುವ ಹೆಣ್ಣು ಮಕ್ಕಳಿಗೆ ಈ ರೀತಿಯ ಒಂದು ವ್ಯವಸ್ಥಿತ ಜಾಲದ ಮಾತಿಗೆ ಬೆಲೆ ಕೊಡುವ ಪರಿಸ್ಥಿತಿ  ಓಂ ರಂತಹ  ಅನೇಕ ನಿರ್ದೇಶಕರು, ಅನೇಕ ದಲ್ಲಾಳಿಗಳು  ಕ್ರಿಯೇಟ್ ಮಾಡಿದ್ದಾರೆ. ಕೇವಲ  ನಿರ್ದೇಶಕರಲ್ಲ, ನಿರ್ಮಾಪಕರು ಸಹಿತ ಈ ವಿಷಯದಲ್ಲಿ ಮುಂದೆ ಇದ್ದಾರೆ. ಕೆಲವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮೈ ಒಪ್ಪಿಸಿದರೆ, ಒಂದಷ್ಟು ಜನರು ತಮ್ಮ ಸಂಭಾವನೆ ಜೊತೆಗೆ ದೇಹ ಹಂಚಿಕೊಂಡವರಿಂದ ಸಾವಿರ ಹೆಚ್ಚಿಗೆ ಪಡೆಯುವ ಘಟನೆಗಳು ಸ್ಯಾಂಡಲ್ ವುಡ್ ನಲ್ಲಿ ಇದೆ..  ತೆರೆಮರೆಯ ಆಟದಲ್ಲಿ ಈ ಬಾರಿ ಮಾತ್ರ  ಕೊಟ್ಟೋನು ಕೋಡಂಗಿ.. ಇಸ್ಕೊಂಡೋನು ಸಹ ಕೋಡಂಗಿ ಆದ ಅಷ್ಟೇ!

Share this Story:

Follow Webdunia kannada