Select Your Language

Notifications

webdunia
webdunia
webdunia
webdunia

ದರ್ಶನ್-ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ವಾಕ್ಸಮರ: ಕಾರಣವೇನು ಗೊತ್ತಾ?

ದರ್ಶನ್-ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ವಾಕ್ಸಮರ: ಕಾರಣವೇನು ಗೊತ್ತಾ?
ಬೆಂಗಳೂರು , ಗುರುವಾರ, 30 ಆಗಸ್ಟ್ 2018 (10:23 IST)
ಬೆಂಗಳೂರು: ಒಂದು ಕಾಲದಲ್ಲಿ ಕುಚುಕು ಗೆಳೆಯರಾಗಿದ್ದು, ನಂತರ ದೂರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಜಗದೀಶ್ ಎಂಬ ದರ್ಶನ್ ಅಭಿಮಾನಿ ಕಿಚ್ಚ ಸುದೀಪ್ ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದು ಇದೀಗ ಸುದ್ದಿಯಾಗಿದೆ. ಸುದೀಪ್ ಅಭಿಮಾನಿಯೊಬ್ಬ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆಗಿನ ಫೋಟೋ ಎಡಿಟ್ ಮಾಡಿ ‘ಮೈ ವೈಫ್’ ಎಂದು ಅಡಿಬರಹ ಕೊಟ್ಟು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು ಈ ವಿವಾದಕ್ಕೆ ಕಾರಣವಾಗಿದೆ.  ಈ ಸಂಬಂಧ ವಿಜಯಲಕ್ಷ್ಮಿ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ ಇದೇ ವಿಚಾರವನ್ನಿಟ್ಟುಕೊಂಡು ದರ್ಶನ್ ಅಭಿಮಾನಿ ಜಗದೀಶ್ ಎಂಬಾತ ಕಿಚ್ಚ ಸುದೀಪ್ ರನ್ನು ಪ್ರಕರಣಕ್ಕೆ ಎಳೆದು ತಂದಿದ್ದು, ಕೀಳು ಶಬ್ಧದಲ್ಲಿ ಸುದೀಪ್ ರನ್ನು ನಿಂದಿಸಿದ್ದಾರೆ. ಇದು ಸುದೀಪ್ ಅಭಿಮಾನಿಗಳು ರೊಚ್ಚಿಗೇಳಲು ಕಾರಣವಾಗಿತ್ತು.

ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಜಗದೀಶ್ ಮತ್ತೆ ಫೇಸ್ ಬುಕ್ ನಲ್ಲಿ ಸೆಲ್ಫೀ ವಿಡಿಯೋ ಹಾಕಿ ಸುದೀಪ್ ಮತ್ತು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರೇ ವಿರುದ್ಧವೇ ಸಮರ ಸಾರಿದ ‘ಅಂತ್ಯ’ ಚಿತ್ರತಂಡ