Select Your Language

Notifications

webdunia
webdunia
webdunia
webdunia

'ಮುಟ್ಟಿನ ಹೈಜೀನ್' ದಿನದಂದು ಮುಟ್ಟಿನ ಕುರಿತಾಗಿ ಜಾಗೃತಿ ಮೂಡಿಸಲು ಹೊರಟ ನಟ ಅಕ್ಷಯ್ ಕುಮಾರ್

'ಮುಟ್ಟಿನ ಹೈಜೀನ್' ದಿನದಂದು ಮುಟ್ಟಿನ ಕುರಿತಾಗಿ ಜಾಗೃತಿ ಮೂಡಿಸಲು ಹೊರಟ ನಟ ಅಕ್ಷಯ್ ಕುಮಾರ್
ಮುಂಬೈ , ಶುಕ್ರವಾರ, 25 ಮೇ 2018 (06:48 IST)
ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಮೇ 28 ರ 'ಮುಟ್ಟಿನ ಹೈಜೀನ್' ದಿನದಂದು ನಡೆಯಲಿರುವ ಮುಟ್ಟಿನ ಕುರಿತಾಗಿ ಜಾಗೃತಿ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


"ಪ್ಯಾಡ್ ಮ್ಯಾನ್" ಸಿನಿಮಾದ ಮೂಲಕ ಹೆಣ್ಣು ಮಕ್ಕಳಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಹೊರಟ  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇದೀಗ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಈ ವಿಚಾರಕ್ಕೆ ಸಂಬಂಧಿಸಿದಂತೆ  ಸಮಾಜದಲ್ಲಿ ಕೆಲ ಬದಲಾವಣೆಗಳನ್ನು ಜಾರಿಗೆ ತರಬಹುದು ಎಂದು ತಿಳಿಸಿದ್ದಾರೆ.

‘ಈ ರೀತಿಯಾದ ಚರ್ಚೆಯನ್ನು ಆರಂಭಿಸಿದಾಗ ನಾವು ಒಂದು ಸಾಮೂಹಿಕ ಸಮಾಜವಾಗಿ ಬದಲಾಗಬಹುದು ಮತ್ತು ಮುಟ್ಟಿನ ನೈರ್ಮಲ್ಯ ದಿನದ ಸಮಾವೇಶವು ನಿಜವಾಗಿಯೂ ಮಹಿಳೆಯ ರಾಷ್ಟ್ರವನ್ನು ಅಧಿಕಾರಕ್ಕೆ ತರುವ ಒಂದು ಸೂಕ್ತವಾದ ವೇದಿಕೆಯಾಗಿದೆ.ಒಟ್ಟಿನಲ್ಲಿ ಪ್ರತಿ ಹೆಣ್ಣು ಮಗುವಿಗೆ ತನ್ನ ಅವಧಿಯನ್ನು ಅಧಿಕಾರವನ್ನು ನಿರ್ವಹಿಸುವ ಹಕ್ಕು ಇದೆ ಎಂದು ಅರ್ಥ ಮಾಡಿಕೊಳ್ಳುವುದು ಹಾಗು ಖಚಿತಪಡಿಸಿಕೊಳ್ಳಬಹುದು ನಮ್ಮ ಘನತೆಗೆ ಸಂಬಂಧಿಸಿದ್ದು ಎಂದು ಅಕ್ಷಯ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ನಟಿ ರಂಭಾ