Select Your Language

Notifications

webdunia
webdunia
webdunia
webdunia

ಉಪರಾಷ್ಟ್ರಪತಿಯಿಂದ ಪ್ರಧಾನಿಯ ಗುಣಗಾನ

ಉಪರಾಷ್ಟ್ರಪತಿಯಿಂದ ಪ್ರಧಾನಿಯ ಗುಣಗಾನ
ಚಿಕಾಗೋ , ಭಾನುವಾರ, 9 ಸೆಪ್ಟಂಬರ್ 2018 (19:55 IST)
ಭಾರತ ಕಳೆದ ನಾಲ್ಕು ವರ್ಷಗಳಿಂದ ಶೀಘ್ರ ಗತಿಯಲ್ಲಿ ಪ್ರಗತಿಯತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದು ಉಪರಾಷ್ಟ್ರಪತಿ, ಪ್ರಧಾನಿಯ ಗುಣಗಾನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.

ಚಿಕಾಗೋದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶಕ್ಕೆ ತೆರಳಿರುವ ಅವರು, ಚಿಕಾಗೋ ನಗರದಲ್ಲಿ ತೆಲಗು ಅಮೆರಿಕನ್ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ. ಭಾರತದ ಅಭಿವೃದ್ಧಿಯಲ್ಲಿ ತೆಲಗು ಸಮುದಾಯದ ಪಾತ್ರದ ಕೊಡುಗೆ ಇದೆ ಎಂದೂ ಅವರು ಹೇಳಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಖೈದಿಗಳಿಂದ ಪರಮೇಶ್ವರ್ ಗೆ ಘೇರಾವ್