Select Your Language

Notifications

webdunia
webdunia
webdunia
webdunia

ಅಡುಗೆ ಮನೆಯಲ್ಲಿ ಕಿರಿಕಿರಿ ಮಾಡುವ ಸಮಸ್ಯೆಗಳಿಗೆ ಇಲ್ಲದೆ ಸೂಪರ್ ಟಿಪ್ಸ್

ಅಡುಗೆ ಮನೆಯಲ್ಲಿ ಕಿರಿಕಿರಿ ಮಾಡುವ ಸಮಸ್ಯೆಗಳಿಗೆ ಇಲ್ಲದೆ ಸೂಪರ್  ಟಿಪ್ಸ್
ಬೆಂಗಳೂರು , ಶುಕ್ರವಾರ, 14 ಸೆಪ್ಟಂಬರ್ 2018 (12:19 IST)
ಬೆಂಗಳೂರು : ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕೆಲವು ವಸ್ತುಗಳಿಂದ ಕಿರಿಕಿರಿ ಎನಿಸಬಹುದು. ಇವುಗಳಿಂದ ಪಾರಾಗಲು ಇಲ್ಲಿವೆ ಕೆಲವು ಟಿಪ್ಸ್ ಗಳು.

*ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ ತೆಗೆಯಿರಿ.
 

* ಈರುಳ್ಳಿ ಸಿಪ್ಪೆ ತೆಗೆದು, ಎರಡು ಬಾಗ ಮಾಡಿ ಒಂದೆರಡು ನಿಮಿಶ ನೀರಿನಲ್ಲಿಟ್ಟು, ನಂತರ ಕತ್ತರಿಸಿದರೆ ಕಣ್ಣೀರು ಬರದು.

 

*ಇರುವೆ ಮತ್ತು ಸಕ್ಕರೆಯ ನಂಟು ಕಂಡರೆ ತುಂಬಾ ಕಿರಿಕಿರಿಯೇ? ಒಂದೆರಡು ಲವಂಗದ ತುಂಡುಗಳನ್ನ ಸಕ್ಕರೆಯ ಡಬ್ಬಿಯಲ್ಲಿ ಇಡಿ. ಅಲ್ಲಿಗೆ ಇರುವೆಗಳು ತಲೆಹಾಕುವುದೂ ಇಲ್ಲ.

 

*ಸಕ್ಕರೆಯ ಪಾಕ ತಣ್ಣಗಾದ ಮೇಲೆ ಹರಳಾಗುವುದನ್ನು ತಡೆಯಲು, ಪಾಕಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ.

 

*ಹೆಪ್ಪು ಹಾಕಲು ಮೊಸರು ಇಲ್ಲವೇ? ಬೆಚ್ಚಗಿನ ಹಾಲಿಗೆ ಒಂದು ಮೆಣಸಿನಕಾಯಿಯನ್ನು ನಡುವೆ ಸೀಳಿ ಹಾಕಿ. ಹಾಂ ಹಾಗೆನೇ, ಹಾಲು ಕಾಯಿಸಬೇಕಾದ್ರೆ ಸ್ವಲ್ಪ ಹಾಲಿನ ಪೌಡರ್ ಹಾಕಿ, ಮೊಸರು ಗಟ್ಟಿಯಾಗಿ ಚೆನ್ನಾಗಿರುತ್ತೆ.

 

*ಮನೇಲಿ ಹಲ್ಲಿಗಳ ಕಾಟ ಹೆಚ್ಚಾಗಿದೆಯಾ? ಹಾಗಿದ್ರೆ, ಸ್ವಲ್ಪ ಕಾಪೀ ಪುಡಿ ಮತ್ತು ತಂಬಾಕು ಸೇರಿಸಿ, ಸಣ್ಣ ಉಂಡೆಗಳನ್ನು ಮಾಡಿ ಮೂಲೇಲಿ ಇಡಿ, ಹಲ್ಲಿಗಳಿಗೆ ಅತ್ತ ಕಡೆ ಸುಳಿಯುವುದೇ ಇಲ್ಲ.

 

*ಬಾಳೆಹಣ್ಣಿನ ತುಂಬುಗಳನ್ನ ಅಲ್ಯೂಮಿನಿಯಂ ಹಾಳೆಯಿಂದ ಸುತ್ತಿಡಿ, ಹಣ್ಣು ಬೇಗ ಹಾಳಾಗಲ್ಲ.

 

*ಅಡುಗೆಮನೆಯ ಸಿಂಕ್ ತುಂಬಾ ಗಲೀಜು ಅನಿಸ್ತಾ ಇದ್ಯಾ..? ಸ್ವಲ್ಪ ಕರ‍್ಪೂರ ಉಪಯೋಗಿಸಿ, ವಾಸನೆ ಬರದು, ಹುಳುಗಳೂ ಇರವು.

 

*ಹಣ್ಣು & ತರಕಾರಿಗಳನ್ನು ತಿನ್ನುವ ಮೊದಲು ಒಂದು ಲೀಟರ್ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಕಿ ತೊಳೆದು ಇಟ್ಟುಕೊಳ್ಳಿ, ಕೀಟನಾಶಕಗಳಿಂದಾಗುವ ಪರಿಣಾಮಗಳನ್ನು ತಗ್ಗಿಸಿ.

 

*ಬೇಳೆಕಾಳುಗಳ ಜೊತೆಗೆ ಸ್ವಲ್ಪ ಲವಂಗದ ಎಲೆ / ಒಣಗಿದ ಬೇವಿನ ಎಲೆಗಳನ್ನು ಸೇರಿಸಿ ಮತ್ತು ಹುಳುಗಳಾಗುವುದನ್ನು ತಡೆಯಿರಿ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಟೀ-ಕಾಫಿ ಸೇವಿಸುವ ಮೊದಲು ನೀರು ಕುಡಿಯಬೇಕು! ಯಾಕೆ ಗೊತ್ತಾ?