Select Your Language

Notifications

webdunia
webdunia
webdunia
webdunia

ಧೋನಿ ಮೇಲೆ ದ್ರಾವಿಡ್ ಸಿಟ್ಟಿಗೆದ್ದಿದ್ದ ಆ ಕ್ಷಣ

ಧೋನಿ ಮೇಲೆ ದ್ರಾವಿಡ್ ಸಿಟ್ಟಿಗೆದ್ದಿದ್ದ ಆ ಕ್ಷಣ
ರಾಂಚಿ , ಭಾನುವಾರ, 8 ಅಕ್ಟೋಬರ್ 2017 (10:35 IST)
ರಾಂಚಿ: ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೆಲವೇ ವರ್ಷದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿ ಜವಾಬ್ದಾರಿಯುತವಾಗಿ ನಡೆದುಕೊಂಡ ಧೋನಿ ಒಮ್ಮೆ ರಾಹುಲ್ ದ್ರಾವಿಡ್ ರ ಕೋಪಕ್ಕೆ ಗುರಿಯಾಗಿದ್ದರಂತೆ.

 
ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ. ಆರಂಭದ ದಿನಗಳಲ್ಲಿ ಧೋನಿ ಬೇಕಾಬಿಟ್ಟಿ ಆಡುತ್ತಿದ್ದಾಗ ನಡೆದ ಘಟನೆಯಿದು. ಆಗ ದ್ರಾವಿಡ್ ತಂಡದ ನಾಯಕರಾಗಿದ್ದರು.

ಪದೇ ಪದೇ ಧೋನಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ತಂಡಕ್ಕೆ ಫಿನಿಶರ್ ನ ಪಾತ್ರ ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದರು. ಒಮ್ಮೆಯಂತೂ ದ್ರಾವಿಡ್ ಧೋನಿ ಮೇಲೆ ಸಿಟ್ಟಾಗಿ ಕೂಗಾಡಿದ್ದರಂತೆ. ಅದಾದ ಬಳಿಕ ತನ್ನ ಬ್ಯಾಟಿಂಗ್ ಶೈಲಿ ಬದಲಿಸಿಕೊಂಡ ಧೋನಿ ಯಶಸ್ವಿಯಾದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಸೀನುವಾಗ ಪಕ್ಕದಲ್ಲಿ ಯಾರೂ ಇರಬಾರದಂತೆ!